ಡೈಲಿ ವಾರ್ತೆ: 01/Sep/2024

ಕುಂದಾಪುರ ಕ್ಷೇತ್ರ ಪಕ್ಷ ನೀಡಿದ ಜವಾಬ್ದಾರಿಗಳನ್ನು ಹಿಂದಿನಿಂದಲೂ ಕೂಡ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದೆ: ಶಾಸಕ ಕಿರಣ್ ಕೊಡ್ಗಿ

ಕುಂದಾಪುರ: ಕುಂದಾಪುರ ಬಿಜೆಪಿಯ ಕಚೇರಿ ನಡೆದ ಸದಸ್ಯತ್ವ ನೋಂದಾವಣಿಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿ ಕಳೆದ 24 ವರ್ಷಗಳಿಂದ ಪಕ್ಷ ನೀಡಿದ ಜವಾಬ್ದಾರಿಯ ಸಂದರ್ಭಗಳಲ್ಲಿ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟರು ಎಲ್ಲರನ್ನು ವಿಶ್ವಾಸದಿಂದ ಒಗೂಡಿಸಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದರು.

ಹಾಗಾಗಿ ಕುಂದಾಪುರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಯಾಗಲಿ, ಪಕ್ಷದ ಜವಾಬ್ದಾರಿಗಳು ಸಮರ್ಪಕವಾಗಿ ನಡೆಯಲು ಸಾಧ್ಯವಾಗಿದೆ ಎಂದರು. ಪಕ್ಷದ ವ್ಯವಸ್ಥೆಯಲ್ಲಿ ಸದಸ್ಯರ ನೋಂದಾವಣಿ ನವೀಕರಣ ಪ್ರಕ್ರಿಯು ನಿರಂತರವಾಗಿ ನಡೆಯುತ್ತಿರುತ್ತದೆ ದೇಶದಲ್ಲಿ 10 ಕೋಟಿ ಸದಸ್ಯರು ಗುರಿ ಹಾಗೆ ರಾಜ್ಯದಲ್ಲಿ ಕೂಡ 1.5 ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿಯನ್ನು ಈಗಾಗಲೇ ನೀಡಲಾಗಿದೆ.
ಇದಕ್ಕಾಗಿ ಕುಂದಾಪುರ ಕ್ಷೇತ್ರ ಪಕ್ಷ ನೀಡಿದ ಜವಾಬ್ದಾರಿಗಳನ್ನು ಹಿಂದಿನಿಂದಲೂ ಕೂಡ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದೆ ಈ ಬಾರಿ ಪಕ್ಷ ನೀಡಿದ ಗುರಿಯನ್ನು ತಲುಪಲು ಎಲ್ಲರು ಒಂದಾಗಿ ಶ್ರಮಿಸೋಣ ದಾಖಲೆಯ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸೋಣ ಎಂದು .
ಸದಸ್ಯತ್ವ ನೋಂದಾವಣೆಯ ಕೈಪಿಡಿ ಬಿಡುಗಡೆಗೊಳಿಸಿದರು.

ಸದಸ್ಯತ್ವ ಅಭಿಯಾನದ ಜಿಲ್ಲಾ ಕಾರ್ಯದರ್ಶಿ ಹಾಗೂ ಇದರ ಸಂಚಾಲಕರಾದ ರಾಘವೇಂದ್ರ ಕುಂದರ್ ಸಮಗ್ರ ಮಾಹಿತಿ ನೀಡುತ್ತಾ ಬಿಜೆಪಿಯಲ್ಲಿ ಸದಸ್ಯತ್ವ ಶಾಶ್ವತವಲ್ಲ ಪ್ರತಿ ಐದು ವರ್ಷಗಳಿಗೊಮ್ಮೆ ಪುನಃ ದಾಖಲಿಸುವ ಪ್ರಕ್ರಿಯೆ ನಡೆಯುತ್ತದೆ ಸಾಮಾನ್ಯ ಸದಸ್ಯ ಹಾಗೂ ಸಕ್ರಿಯ ಸದಸ್ಯ ಎನ್ನುವ ಎರಡು ಹಂತದಲ್ಲಿ ಈ ನೋಂದಾವಣೆ ನಡೆಯುತ್ತದೆ.
ಪಕ್ಷದ ವಿಚಾರ ವಿಸ್ತಾರಕ್ಕೆ ಇದು ಉತ್ತಮ ಮಾರ್ಗವಾಗಿದೆ ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 25 ತನಕ ಸದಸ್ಯತ್ವ ಅಭಿಯಾನ ನಡೆಯುತ್ತದೆ ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅಭಿಯಾನ ಎಂದು ಹೆಸರಿಡಲಾಗಿದೆ.
ಹಾಗೆ ಪ್ರಧಾನಿ ನರೇಂದ್ರ ಮೋದಿಜಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 11 ರಿಂದ 17ರ ತನಕ ಮಹಾ ಅಭಿಯಾನ ಕೂಡ ನಡೆಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಮಂಡಲದ ಬಿಜೆಪಿ ಕ್ಷೇತ್ರಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಮಾತನಾಡಿ ರಾಷ್ಟ್ರದಲ್ಲಿ ಮೂರನೆಯ ಬಾರಿಗೆ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು. ರಾಜ್ಯದಲಿ ಒಂದುವರೆ ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ನೀಡಿದ್ದು.
ಕುಂದಾಪುರದ 52 ಶಕ್ತಿ ಕೇಂದ್ರಗಳ ಮೂಲಕ ಯಶಸ್ವಿಯಾಗಿ ಸದಸ್ಯತ್ವ ಅಭಿಯಾನ ಆಗಬೇಕು.
ಕಳೆದ ಬಾರಿಗಿಂತ ಹೆಚ್ಚಿನ ಸದಸ್ಯರನ್ನು ನೋಂದಾಯಿಸುವ ಕೆಲಸ ನಮ್ಮೆಲ್ಲರ ಮೂಲಕ ಆಗಬೇಕಾಗಿದೆ ಎಂದು ಪ್ರಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ
ಮಂಡಲದ ನಿಕಟ ಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ ಸದಸ್ಯತ್ವ ಅಭಿಯಾನದ ತಾಲೂಕು ಸಂಚಾಲಕರಾದ ಕಾಡೂರು ಸುರೇಶ್ ಶೆಟ್ಟಿ, ಸಹ ಸಂಚಾಲಕರಾದ ಸದಾನಂದ ಬಳ್ಕೂರು, ಸುಧೀರ್ .ಕೆ.ಎಸ್,ರೂಪಾ ಪೈ, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ
ಸುಧೀರ್ ಕೆ.ಎಸ್ ಸ್ವಾಗತಿಸಿದರು,
ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮದ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ
ಸದಾನಂದ ಬಳ್ಕೂರು ವಂದಿಸಿದರು.

ಸದ್ರಿ ಕಾರ್ಯಕ್ರಮದಲ್ಲಿ ,
ಕುಂದಾಪುರ ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾ ಪದಾಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಪಕ್ಷದ ಮುಖಂಡರು ಉಪಸಿತರಿದ್ದರು.