ಡೈಲಿ ವಾರ್ತೆ: 08/Sep/2024

ರಾಕೆಟ್ ದಾಳಿ ಬಳಿಕ ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಐದು ಮಂದಿ ಸಾವು

ಜಿರಿಬಾಮ್: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಐವರು ಸಾವಿಗೀಡಾಗಿದ್ದಾರೆ.

ಮಣಿಪುರದ ಶಂಕಿತ ಉಗ್ರರು ಬಿಷ್ಣುಪುರದ ಎರಡು ಸ್ಥಳಗಳಲ್ಲಿ ನಡೆಸಿದ ರಾಕೆಟ್ ದಾಳಿಯಿಂದ ಹಿರಿಯ ನಾಗರಿಕರೊಬ್ಬರು ಸಾವಿಗೀಡಾಗಿದ್ದು, ಐವರಿಗೆ ಗಾಯಗಳಾಗಿತ್ತು. ಇದರ ಬೆನ್ನಲ್ಲೇ ಈ ಹಿಂಸಾಚಾರ ನಡೆದಿದೆ.

ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ವರದಿಯಾದ ಹಿಂಸಾಚಾರದಲ್ಲಿ ನಾಲ್ವರು ಉಗ್ರರು ಮತ್ತು ಒಬ್ಬ ನಾಗರಿಕ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಾಗರಿಕನನ್ನು ಅವನ ಮನೆಯೊಳಗೆ ಕೊಲ್ಲಲಾಯಿತು. ನಂತರ ನಡೆದ ಇದು ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.