ಡೈಲಿ ವಾರ್ತೆ: 13/Sep/2024

ನಾಗಮಂಗಲ ಕೋಮು ಸಂಘರ್ಷ ಜೆಡಿಎಸ್, ಬಿಜೆಪಿ ಪ್ರಾಯೋಜಿತ ಪಿತೂರಿ: ಕಾಂಗ್ರೆಸ್ ಯುವ ಮುಖಂಡ ನಾಗೇಂದ್ರ ಪುತ್ರನ್ ಆರೋಪ

ಕೋಟ: ಈ ಬಿಜೆಪಿ ಜೆಡಿಎಸ್ ನ ಅಪ್ಪ ಮಕ್ಕಳ ಪಕ್ಷವಾಗಿ ಜೋರಾಗಿ ಹೊರ ಹೊಮ್ಮುತ್ತಿದೆ. ಮುಂದಿನ ದಿನದಲ್ಲಿ ಇವರ ಮಕ್ಕಳ ಭವಿಷ್ಯ ರೂಪಿಸಲು ಇವರುಗಳು ಮಾಡುವ ಪೂರ್ವ ನಿಯೋಜಿತ ತಯಾರಿಯಾಗಿದೆ.

ಇಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಮಕ್ಕಳು ವಿಧಾನ ಸಭೆಗೆ ಹಾಗೂ ಸಂಸತ್ತಿಗೆ, ಆದರೆ ಬಡವರ ಮನೆ ಮಕ್ಕಳು ಜೈಲಿಗೆ. ಇದೆ ಇವರ ಯೋಜನೆ ಮತ್ತು ಯೋಚನೆಯಾಗಿದೆ.

ಬಡವರ ಮನೆ ಮಕ್ಕಳನ್ನು ದುರುಪಯೋಗ ಮಾಡಿಕೊಂಡು ಪ್ರಕರಣದಲ್ಲಿ ಸಿಲುಕಿಸಿ ಇದು ಕಾಂಗ್ರೇಸ್ ನವರೇ ಮಾಡಿಸಿದ್ದು ಎಂದು ಗೂಬೆ ಕೂರಿಸುವುದು ಎಷ್ಟು ಸರಿ. ಇವೆಲ್ಲನ್ನು ಹಿಂದುಳಿದ ವರ್ಗದವರು ಹಾಗೂ ಎಲ್ಲಾ ವರ್ಗದ ಬಡವರು ಆಲೋಚನೆ ಮಾಡಬೇಕು. ಈ ದೇಶದಲ್ಲಿ ಕಾಂಗ್ರೇಸ್ ಎಂದರೆ ಶೂದ್ರರ ಜೊತೆ ಇರುವ ಹಾಗೂ ಹಿಂದುಳಿದ ಜನರಿಗೆ ಕೈ ಬಲಪಡಿಸಿದ ಪಕ್ಷ ಕಾಂಗ್ರೇಸ್. ಈ ಬಿಜೆಪಿ ಜನಗಳ ಮದ್ಯೆ ಬಿರುಕು ಮೂಡಿಸಿ ಇವತ್ತು ನಾಗಮಂಗಲದಲ್ಲಿ ಗಲಭೆ ಎಬ್ಬಿಸಲು ಮೂಲ ಕಾರಣ. ಇದೆ ರೀತಿ ಮುಂದಿನ ದಿನಗಳಲ್ಲಿ ಬಿಜೆಪಿ ಮಾತು ಕೇಳಿ ಈ ರೀತಿ ಗಲಭೆ ಎಬ್ಬಿಸಿದರೆ ಮುಂದೆ ಬಡವರ ಮನೆ ಮಕ್ಕಳ ತಾಯಿ ಕಣ್ಣೀರ ಹನಿ ಜೈಲಿನ ಕಬ್ಬಿಣದ ಸಲಾಖೆ ಮೇಲೆ ಬೀಳುತ್ತದೆ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಬಿಜೆಪಿ ವಿರುದ್ಧ ಕಿಡಿಕಾರಿದರು.