ಡೈಲಿ ವಾರ್ತೆ: 16/Sep/2024

ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ವಾಗ್ದಾಳಿ

ಕೋಟ: ಯಶ್ಪಾಲ್ ಸುವರ್ಣ ಒಬ್ಬ ಬುದ್ಧಿವಂತರ ಜಿಲ್ಲೆಯ ಶಾಸಕರಾಗಿ ಗಂಡಸ್ತನ ಬಗ್ಗೆ ಮಾತನಾಡುವುದು ಎಷ್ಟು ಸರಿ.
ಬಾಯಿ ತೆಗೆದರೆ ಸಾಕು ಬರಿ ಗಂಡಸ್ತನ ಗಂಡಸ್ತನ ಎಂಬ ಹೇಳಿಕೆ.

ಈ ಬುದ್ದಿವಂತರ ಜಿಲ್ಲೆಯ ನಿಷ್ಠಾವಂತ ಶಾಸಕರಾಗಿದ್ದ ಇವರು ರೌಡಿಗಳ ಹಾಗೆ ವರ್ತಿಸುದನ್ನು ಬಿಟ್ಟು ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಮೊದಲು ಆಲೋಚನೆ ಮಾಡಲಿ, ಆಮೇಲೆ ಕಾಂಗ್ರೆಸ್ ಗಂಡಸ್ತನದ ಬಗ್ಗೆ ಪ್ರಶ್ನೆ ಮಾಡಲಿ.

ನಿಮ್ಮ ಹಾಗೆ ಊರು ತುಂಬಾ ಬೇಕಾಬಿಟ್ಟಿಯಾಗಿ ಗಂಡಸ್ತನ ತೋರಿಸಲು ಅದು ಸಂಗ್ರಹಾಲಯದ ವಸ್ತು ಅಲ್ಲ. ನೀವು ಬಿಜೆಪಿಯ ಶಾಸಕರು ಎಲ್ಲಿ ಬೇಕಾದರೂ ಗಂಡಸ್ತನ ತೋರಿಸ್ತೀರಿ.. ಇಂತಹ ಕೆಟ್ಟ ಹೇಳಿಕೆಗಳನ್ನೆಲ್ಲ ಬಿಟ್ಟು ನೀವು ನಮ್ಮ ಜಿಲ್ಲೆಯ ಸಂಸ್ಕಾರ ಸಂಸ್ಕೃತಿಗೆ ಅನುಗುಣವಾಗಿ ಇರಲು ಕಲಿಯಿರಿ. ನಮ್ಮ ಜಿಲ್ಲೆಯ ಶಾಸಕರೆಂಬ ಗೌರವ ನಮಗೆ ಇದೆ ನೀವು ಕೂಡ ಒಬ್ಬ ಒಳ್ಳೆಯ ಶಾಸಕರಾಗಿ ಉಡುಪಿ ಜಿಲ್ಲೆಯ ಗೌರವ ಉಳಿಸಿ ಎಂದು ಉಸ್ತುವಾರಿ ಸಚಿವರ ವಿರುದ್ಧ ಬಾಯಿ ಹರಿಬಿಟ್ಟ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ವಾಗ್ದಾಳಿ ಮಾಡಿದ್ದಾರೆ.