ಡೈಲಿ ವಾರ್ತೆ: 17/Sep/2024

ಹೊನ್ನಾಳದಲ್ಲಿ ಸರ್ವರಿಗೂ ಸಿಹಿತಿಂಡಿ ಹಂಚುವುದರ ಮೂಲಕ ಸೌಹಾರ್ದತೆಯ ಮಿಲಾದ್ ಜಾಥಾ

ಬ್ರಹ್ಮಾವರ: ಖದೀಮ್ ಜಾಮಿಯ ಮಸೀದಿ ಹೊನ್ನಾಳ,ಮದ್ರಸಾ ಮೊಹಮ್ಮದೀಯ ಹೊನ್ನಾಳ, ಸುನ್ನಿ ಸ್ಟುಡೆಂಟ್ಸ್ ಫೇಡರೇಶನ್ ಹೊನ್ನಾಳ ಶಾಖೆ, ಕರ್ನಾಟಕ ಮುಸ್ಲಿಂ ಜಮಾಅತ್ತ್ ಹೊನ್ನಾಳ ಶಾಖೆ ಇವರ ಜಂಟಿ ಆಶ್ರಯದಲ್ಲಿ ತಾರೀಕು ಸೆ. 16 ರಂದು ಸೋಮವಾರ ಬೆಳಿಗ್ಗೆ ಹೊನ್ನಾಳದಲ್ಲಿ ಸೌಹಾರ್ದ ಮಿಲಾದ್ ಜಾಥ ನಡೆಯಿತು.

ಹಝ್ರತೇ ಹಜಾನಿಮಾ ರಹಮತುಲ್ಲಾಹಿ ಅಲೈಹಾ ದರ್ಗಾ ಶರೀಫ್ ನಲ್ಲಿ ಮೌಲಾನಾ ಮುಹಮ್ಮದ್ ಶಾಕಿರ್ ಖಾದ್ರಿಯವರ ನೇತೃತ್ವದಲ್ಲಿ ನಡೆದ ಝಿಯಾರತ್ ಹಾಗೂ ದುವಾದೂಂದಿಗೆ ಆರಂಭವಾದ ಜಾಥಾಗೆ ಜಾಮಿಯ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ರವರು ಚಾಲನೆ ನೀಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ H. ಸುಭಾನ್ ಅಹ್ಮದ್ ಹೊನ್ನಾಳ ಮೀಲಾದ್ ಸಂದೇಶ ನೀಡಿದರು. ಜಾಥವೊ ಧಫ್ಫ್ ಹಾಗೂ ನಾತ್ ನೊಂದಿಗೆ ಸಾಗಿತ್ತು. ಸುನ್ನಿ ಸ್ಟುಡೆಂಟ್ಸ್ ಫೇಡರೇಶನ್ ಹೊನ್ನಾಳ ಘಟಕದ ವತಿಯಿಂದ ಸಂಘಟನೆಯ ಅಧ್ಯಕ್ಷ ಬಿ. ಎಸ್ ಸೆಹರಾನ್ ಪ್ರದಾನ ಕಾರ್ಯದರ್ಶಿ ಮುಹಮ್ಮದ್ ಸಾದ್ ರವರ ನೇತೃತ್ವದಲ್ಲಿ ಜಾಥಾ ಸಾಗಿದಲ್ಲಿ ಇರುವ ಮನೆಗಳ ಮತ್ತು ನೆರೆದಂತಹ ಎಲ್ಲಾ ಪರಧರ್ಮಿಯ ಸಹೋದರರಿಗೆ ಸಿಹಿ ತಿಂಡಿಯನ್ನು ಹಂಚುವುದರ ಮೂಲಕ ಸೌಹಾರ್ದತಾ ಮಿಲಾದ್ ಜಾಥವನ್ನು ನಡೆಸಲಾಯಿತು.

ಈ ಜಾಥಾದ ಯಶಸ್ಸಿಗೆ ಮಸೀದಿ ಹಾಗೂ ಮದ್ರಸಾ ಸಮಿತಿಯ ನಾಯಕರೂ,ವಿವಿಧ ಸಂಘಟನೆಗಳ ಮುಖಂಡರು ಜಮಾಅತ್ತಿನ ಪ್ರಮುಖರು ಹಾಗೂ ಜಮಾಅತ್ತ್ ಭಾಂದವರು ಸಹಕರಿಸಿದರು