ಡೈಲಿ ವಾರ್ತೆ: 24/Sep/2024

ನಾವುಂದ: ಬೈಕ್ ಗೆ ಸ್ಕೂಲ್ ಬಸ್ ಡಿಕ್ಕಿ – ಸವಾರ ಪಾರು, ಬೈಕ್ ಜಖಂ!

ಕುಂದಾಪುರ: ಸ್ಕೂಲ್ ಬಸ್ಸೊಂದು ಬೈಕ್​ಗೆ ಡಿಕ್ಕಿ ಹೊಡೆದು ಸವಾರ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಪಾಯದಿಂದ ಪಾರಾದ ಘಟನೆ ಬೈಂದೂರು ತಾಲೂಕಿನ ನಾವುಂದ ಬಡಾಕೆರೆಯಲ್ಲಿ ಸೆ. 24 ರಂದು ಮಂಗಳವಾರ ಮಧ್ಯಾಹ್ನ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ ನಾಗೇಶ್ (40) ಎಂದು ತಿಳಿದು ಬಂದಿದೆ.

ಕುಂದಾಪುರ ವೆಂಕಟರಮಣ ಶಾಲೆಯ ಮಕ್ಕಳನ್ನು ಶಾಲಾಬಸ್ಸಿನಲ್ಲಿ ಕರೆದುಕೊಂಡು ಚಾಲಕ ಅತೀ ವೇಗ ಹಾಗೂ ನಿರ್ಲಕ್ಷದಿಂದ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿಯಿಂದ 300 ಮೀಟರ್ ಒಳಗಡೆ ಇರುವ ನಾವುಂದ ಬಡಾಕೆರೆ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕಿಗೆ ನೇರ ಡಿಕ್ಕಿ ಹೊಡೆಡಿರುತ್ತದೆ.
ಡಿಕ್ಕಿಯ ರಭಸಕ್ಕೆ ಸವಾರ ತೋಡಿಗೆ ಬಿದ್ದಿದ್ದು ಬೈಕ್ ಬಸ್ಸಿನ ಚಕ್ರದಡಿಗೆ ಸಿಲುಕಿ ಜಖಂ ಗೊಂಡಿರುತ್ತದೆ.
ಬೈಕ್ ಸವಾರ ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾನೆ.
ತಕ್ಷಣ ಸ್ಥಳೀಯರು ಸವಾರನನ್ನು ಕುಂದಾಪುರ ಆಸ್ಪತ್ರೆ ಸಾಗಿಸಿರುತ್ತಾರೆ.
ಬೈಂದೂರು ಠಾಣಾ ಪೊಲೀಸರು ಸ್ಥಳಕಾಗಮಿಸಿ ಪರಿಶೀಲಿಸಿದ್ದಾರೆ.