ಡೈಲಿ ವಾರ್ತೆ: 02/OCT/2024

ಗೋವಿಗಾಗಿ ನಾವು “ಪ್ರಚಾರಕ್ಕಲ್ಲ ಪ್ರೇರಣೆಗೆ ” ಇಂದು ಎರಡನೇ ಹಂತದ ಅಭಿಯಾನ

ಕೋಟ: ಗೋವಿಗಾಗಿ ನಾವು “ಪ್ರಚಾರಕ್ಕಲ್ಲ ಪ್ರೇರಣೆಗೆ ” ಇಂದು ಎರಡನೇ ಹಂತದ ಅಭಿಯಾನ ನಡೆಯಿತು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ಪ್ರಯುಕ್ತ ಪ್ರವೀಣ್ ಗಡಿಯಾರ ಬಾರ್ಕೂರು ಹಾಗೂ ಸುನಿಲ್ ಶೆಟ್ಟಿ ಕಾವಡಿ ಒಂದು ಲೋಡು ಹಸಿ ಹುಲ್ಲು ನೀಡಿ ಅಭಿಯಾನದಲ್ಲಿ ಪಾಲ್ಗೊಂಡರು.

ಇಂದು ಗೋವಿಗೆ ಆಹಾರವನ್ನು ಒದಗಿಸಿದಂತ ಪ್ರವೀಣ್ ಗಡಿಯಾರ ಬಾರ್ಕೂರು ಹಾಗೂ ಸುನಿಲ್ ಶೆಟ್ಟಿ ಕಾವಡಿ ಅವರಿಗೆ ಗೋವಿಗಾಗಿ ನಾವು ಸಂಘಟನೆಯ ವತಿಯಿಂದ ಅಭಿನಂದನೆಗಳು ಹಾಗೂ ಅವರಿಗೆ ಇನ್ನಷ್ಟು ಗೋ ಸೇವೆ ಮಾಡುವ ಶಕ್ತಿ ಆ ಭಗವಂತ ಕೊಡಲಿ ಎಂದು ಸಂಘಟನೆಯ ರೂವಾರಿ ನಾಗೇಂದ್ರ ಪುತ್ರನ್ ಹೇಳಿದರು.

ಈ ಸಂದರ್ಭದಲ್ಲಿ ಗೋಪಾಲ್ ಬಂಗೇರ, ವಿಜಯ್ ಶೆಟ್ಟಿ ಅವರ್ಸೆ, ಭರತ್ ಗಾಣಿಗ ಕೋಟ, ಗೋವಿಗಾಗಿ ನಾವು ಸಂಘಟನೆಯ ರೂವಾರಿ ನಾಗೇಂದ್ರ ಪುತ್ರನ್ ಕೋಟ ಉಪಸ್ಥಿತರಿದ್ದರು.