ಡೈಲಿ ವಾರ್ತೆ: 02/OCT/2024

ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಗಂಗಾವಳಿ.ಗಾಂಧಿ ಜಯಂತಿ ಆಚರಣೆ

ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರ ಪಿತ ಮಹಾತ್ಮ ಗಾಂಧಿಜಿಯವರ ಗಾಂಧಿ ಜಯಂತಿಯನ್ನು ಅವರ ಭಾವ ಚಿತ್ರಕ್ಕೆ ಹೂವು ಹಾಕುವ ಮೂಲಕ ಆಚರಿಸಲಾಯಿತು. ಮಾಜಿ ಅಧ್ಯಾಪಕರಾದ ಅಲಿ ಮೌಲವಿ ಅತಿಥಿಯಾಗಿ ಭಾಗವಹಿಸಿ ಮಹಾತ್ಮ ಗಾಂಧೀಜಿಯವರ ಬಗ್ಗೆ ಹಾಗು ಅವರು ದೇಶಕ್ಕಾಗಿ ಮಾಡಿಡ ತ್ಯಾಗದ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಕನ್ನಡ ಶಿಕ್ಷಕಿಯಾದ ಇಂದಿರಾ ಎಚ್. ಕವರಿ. ಉರ್ದು ಶಿಕ್ಷಕಿಯಾದ ಶಭೀನಾ ಹಾಗು ಶಾಲೆಯ ಎಸ್ ಡಿ ಎಂ ಸಿ. ಅಧ್ಯಕ್ಷರಾದ ಶೌಕತ್ ಮೊಯ್ದಿನ್ ಸಾಬ್. ಹಂಝ ಚಾಬು ಸಾಬ್. ಹಾಗು ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಶಾಲೆ ಯ ಸುತ್ತ ಮುತ್ತ ಸ್ವಚ್ಚ ಗೊಳಿಸಿದರು.ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.