ಡೈಲಿ ವಾರ್ತೆ: 05/OCT/2024

ಅ. 8 ರಂದು ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜುನಲ್ಲಿ ಆರೋಗ್ಯ ಶಿಬಿರ

ಬ್ರಹ್ಮಾವರ: ಪ್ರಯೋರಿಟಿ ಒನ್ ಇಂಡಿಯಾ ಸ್ಥಾಪಕ ಡಾ.ಸಿ.ಟಿ. ಅಬ್ರಹಾಂ ಅವರ ಸ್ಮರಣಾರ್ಥವಾಗಿ ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜು, ಬ್ರಹ್ಮಾವರ ರೋಟರಿ ಕ್ಲಬ್ ಮತ್ತು ಉಡುಪಿ ಆದರ್ಶ ಆಸ್ಪತ್ರೆಯ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಇದೇ 8 ರಂದು ಕ್ರಾಸ್ ಲ್ಯಾಂಡ್ ಕಾಲೇಜಿನ‌ ಸಭಾಂಗಣದಲ್ಲಿ ನಡೆಯಲಿದೆ.

ಚಾಂತಾರಿನ CFC ಯುವ ವೇದಿಕೆ, ಕುಂಜಾಲು ಸ್ಫೂರ್ತಿ ಗೆಳೆಯರ ಬಳಗ, ಚಾಂತಾರಿನ ಚಾನ್ ಸ್ಟಾರ್ ಯೂತ್‌ ಕ್ಲಬ್ ಸಹಯೋಗದೊಂದಿಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುವ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ತಜ್ಜ ವೈದ್ಯರಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧೀ ತಪಾಸಣೆ, ಇ.ಸಿ.ಜಿ ಹಾಗೂ ಸ್ತ್ರೀ ರೋಗ ಸಂಬಂಧಿ ತಪಾಸಣೆಗಳು ನಡೆಯಲಿದೆ ಎಂದು ರೋಟರಿ ಬ್ರಹ್ಮಾವರ‌ ಅಧ್ಯಕ್ಷ ಶ್ರೀಧರ ಶೆಟ್ಟಿ ಮತ್ತು ಕಾರ್ಯಕ್ರಮದ ಸಂಯೋಜಕ ಆರೂರು ತಿಮ್ಮಪ್ಪ ಶೆಟ್ಟಿ ತಿಳಿಸಿದ್ದಾರೆ.