ಡೈಲಿ ವಾರ್ತೆ: 06/OCT/2024

ವಿಠಲವಾಡಿ ಫ್ರೆಂಡ್ಸ್ ವತಿಯಿಂದ ಹೊಸ್ತಿನ ಕಾರ್ಯಕ್ರಮ

ಕುಂದಾಪುರ: ವಿಠಲವಾಡಿ ಪರಿಸರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 26ನೇ ವರ್ಷದ ತೆನೆಪರ್ವ ಕಾರ್ಯಕ್ರಮ ಮಾಡಲಾಯಿತು.

ಮೊದಲಿಗೆ ಕದಿರು ಶಾಸ್ತ್ರ ಮಾಡಿ ಮನೆ ಮನೆಗಳಲ್ಲಿ ಕದಿರು ಕಟ್ಟಿ ಹೊಸ್ತಿನ ಕಾರ್ಯಕ್ರಮ ಶುರುವಿಟ್ಟು, ವಿಠಲವಾಡಿ ವಠಾರದಲ್ಲಿ ಊರಿನವರಿಗೆ ಇತರ ಆಟೋಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ಸುರೇಶ ವಿಠಲವಾಡಿ, ಸ್ಥಾಪಕರಾದ ಅಶೋಕ ವಿಠಲವಾಡಿ, ವಿಠಲವಾಡಿ ಫ್ರೆಂಡ್ಸ್ ನ ಅಧ್ಯಕ್ಷ ನಿಕಿಲ್ ವಿಠಲವಾಡಿ, ಕಾರ್ಯದರ್ಶಿ ಪ್ರವೀಣ್ ಬಂಗೇರ ವಿಠಲವಾಡಿ, ಯೋಜನಾಧಿಕಾರಿ ದಿನೇಶ ಪುತ್ರನ್ ವಿಠಲವಾಡಿ, ಕ್ರಿಡಾ ಕಾರ್ಯದರ್ಶಿ ಶರತ್ ವಿಠಲವಾಡಿ, ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿರೂಪಣೆಯನ್ನು ನಿತ್ತಿನ್ ವಿಠಲವಾಡಿ, ರಾಘು ವಿಠಲವಾಡಿ ನಿರ್ವಹಿಸಿದರು. ಈ ಕಾರ್ಯಮದಲ್ಲಿ ಊರ ಪರ ಊರ ಸಾರ್ವಜನಿಕರು ಮಕ್ಕಳು ಇದ್ದರು.