ಡೈಲಿ ವಾರ್ತೆ: 10/OCT/2024

ಸಾಲಿಗ್ರಾಮ ಮಕ್ಕಳ ಮೇಳದ 50 ರ ಸಂಭ್ರಮ “ಸುವರ್ಣ ಪರ್ವ” ಡಾ.ವೀರೇಂದ್ರ ಹೆಗ್ಗಡೆ ಅವರಿಂದ ಉದ್ಘಾಟನೆ

ಕೋಟ: ಅಕ್ಟೋಬರ್ 10, 1975 ರಂದು ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪನಾ ದಿನವಾಗಿದೆ.
ಇಂದು ಅದೇ ದಿನ ಅಂದರೆ ಅಕ್ಟೋಬರ್ 10 ರಂದು
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರಾಜರ್ಷಿ ವೀರೇಂದ್ರ ಹೆಗ್ಗಡೆ ಅವರಿಂದ ಮಕ್ಕಳ ಮೇಳದ 50 ರ ಸಂಭ್ರಮ ಸುವರ್ಣ ಪರ್ವ ದ ಉದ್ಘಾಟನೆ ನೆರವೇರಿತು.

ಈ ಸಂದರ್ಭದಲ್ಲಿ ಬಾಲ ಕಲಾವಿದರಿಂದ ಹೂವಿನಕೋಲು ಸಂಪನ್ನಗೊಂಡಿತು.