ಡೈಲಿ ವಾರ್ತೆ: 13/OCT/2024

ಟೀಮ್ ಭವಾಬ್ಧಿ ಕೋಟತಟ್ಟು ವತಿಯಿಂದ ಗೋವಿನೆಡೆಗೆ ನಮ್ಮ ಕೊಡುಗೆಯ ಪ್ರಯುಕ್ತ 500 ಕೆಜಿ ಹಿಂಡಿ ಬೂಸಾ ಗೋಶಾಲೆಗೆ ಕೊಡುಗೆ

ಕೋಟ: ಟೀಮ್ ಭವಾಬ್ಧಿ ಕೋಟತಟ್ಟು ಪಡುಕರೆ ವತಿಯಿಂದ ಅ.13 ರಂದು ಭಾನುವಾರ ಬೆಳಿಗ್ಗೆ 500 ಕೆಜಿ ಹಿಂಡಿ ಬೂಸವನ್ನು ಗೋವಿನೆಡೆಗೆ ನಮ್ಮ ಕೊಡುಗೆ ಯ ಪ್ರಯುಕ್ತ ಪ್ರತಿ ವರ್ಷದಂತೆ ಕೋಟೇಶ್ವರ ಹೂವಿನಕೆರೆ ಉಡುಪಿ ಕೃಷ್ಣಮಠದ ಸೋದೆ ಮಠಕ್ಕೆ ಸಂಬಂಧಿಸಿದ ಗೋ ಶಾಲೆಗೆ ನೀಡಲಾಯಿತು.

ಈ ಸಂಧರ್ಭದಲ್ಲಿ ಟೀಮ್ ಭವಾಬ್ಧಿಯ ಅಧ್ಯಕ್ಷರಾದ ಸಂತೋಷ ತಿಂಗಳಾಯ , ಉಪಾಧ್ಯಕ್ಷರಾದ ಉದಯ್ ಬಂಗೇರ , ಹಾಗು ಸದಸ್ಯರು ಉಪಸ್ಥಿತರಿದ್ದರು.