ಡೈಲಿ ವಾರ್ತೆ: 13/OCT/2024

ವಿವಿಧಡೆ ಸಂಭ್ರಮದ ಶರನ್ನವರಾತ್ರಿ ಧಾರ್ಮಿಕ ಕಾರ್ಯಕ್ರಮಕ್ಕೆ : ಶಾಸಕ ಕಿರಣ್ ಕೊಡ್ಗಿ ಭೇಟಿ

ಕುಂದಾಪುರ: ಆ:12 ವಿಜಯದಶಮಿಯ ಪರ್ಯಂತ ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ನಿನ್ನೆ ಶನಿವಾರ ದಿವಸ ವಿಜಯದಶಮಿಯ ಪ್ರಯುಕ್ತ ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶಾರದೋತ್ಸವ ಸಮಿತಿ ಇವರ ಸುವರ್ಣ ಮಹೋತ್ಸವದ ಕಾರ್ಯಕ್ರಮ ಹಾಗೂ ಕುಂದಾಪುರದ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನ, ಮತ್ತು ಬ್ರಹ್ಮಶ್ರೀ ನಾರಾಯಣಗುರು ಯುವಕ ಮಂಡಲ ಕುಂದಾಪುರ 47ನೇ ವರ್ಷದ ಶಾರೋತ್ಸವದ ಸಂಭ್ರಮಕ್ಕೂ ಭೇಟಿ ನೀಡಿ, ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಆಯಾಯ ಆಯಾಯ ಸಂಸ್ಥೆಯ ಧಾರ್ಮಿಕ ಮುಖಂಡರು, ಯುವಕ ಮಂಡಲದ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.