ಡೈಲಿ ವಾರ್ತೆ: 19/OCT/2024

ಬಸ್ಸಿಗೆ ಅಡ್ಡ ಬಂದ ಹಸುಗಳನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ

ಆನಂದಪುರ: ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ಆನಂದಪುರ ಸಮೀಪ ಮುಂಬಾಳ್ ನಲ್ಲಿ ಶನಿವಾರ(ಅ.19) ರಂದು ಸಂಭವಿಸಿದೆ.

ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸು ಆನಂದಪುರದಿಂದ ಸಾಗರಕ್ಕೆ ತರುಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಬಲಭಾಗ ಸಂಪೂರ್ಣ ಜಖಂಗೊಂಡಿದ್ದು ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಸ್ತೆಯ ಮೇಲಿದ್ದ ಹಸುಗಳನ್ನು ತಪ್ಪಿಸಲು ಹೋಗಿ ಬಸ್ ಕಾರಿಗೆ ಗುದ್ದಿರುವುದಾಗಿ ತಿಳಿದು ಬಂದಿದೆ.