ಡೈಲಿ ವಾರ್ತೆ: 23/OCT/2024

ಕುಂದಾಪುರ: ಜಪ್ತಿಯಲ್ಲಿ ಕಟ್ಟಡದಿಂದ ಬಿದ್ದು ಯುವಕ ಮೃತ್ಯು

ಕುಂದಾಪುರ: ಜಪ್ತಿ ಗ್ರಾಮದ ಪೈಪ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ನಡೆದಿದೆ.

ಜಾರ್ಖಂಡ್ ಲೋಹ ದರ್ಗಾನಾ ಜಿಲ್ಲೆಯ ಜೋಗಿಂದರ್ ಬರೋನ್ (29) ಮೃತಪಟ್ಟ ವ್ಯಕ್ತಿ

ಇವರು ಕೆಲಸಕ್ಕೆ ರಜೆ ಮಾಡಿ ಸರೋಜಾ ಬರೋನ್, ಶಬ್ಬೀರ್ ಹಾಗೂ ಮುನ್ನ ಬರೊನ್ ಜೊತೆ ಫ್ಯಾಕ್ಟರಿ ಕಟ್ಟಡದ ಸ್ಲಾಬ್ ನ ಮೇಲೆ ಮೊಬೈಲ್ನಲ್ಲಿ ಮಾತಾಡುತ್ತಿದ್ದಾಗ ಸುಮಾರು 15 ಅಡಿ ಎತ್ತರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.