ಡೈಲಿ ವಾರ್ತೆ: 28/OCT/2024

ಕಲ್ಲಡ್ಕ : ಗೊಳ್ತಮಜಲ್ ಸಮೀಪದ ಮಾಣಿಮಜಲ್ ನಿವಾಸಿ ಅಮರ್ ಬೀಡಿ ಮಾಲಕ ಯೂಸುಫ್ ಹಾಜಿ ನಿಧನ

ಬಂಟ್ವಾಳ ; ಗೊಳ್ತಮಜಲ್ ಸಮೀಪದ ಮಾಣಿಮಜಲ್ ನಿವಾಸಿ ಅಮರ್ ಬೀಡಿ ಮಾಲಕ ಯೂಸುಫ್ ಹಾಜಿ (70) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು .

ಗೊಳ್ತಮಜಲ್ ರಹ್ಮಾನಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ಕಲ್ಲಡ್ಕ ಕೇಂದ್ರ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.