ಡೈಲಿ ವಾರ್ತೆ: 02/ಫೆ /2025
ಸರ್ಕಾರಿ ಬಸ್ ಚಾಲಕನ ನಿರ್ಲಕ್ಷತನ| ಬಸ್ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಚಾಲಕನ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ
ಸಾಗರ| ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ದಿಂದ ಸಾಗರಕ್ಕೆ ತೆರೆಳುತ್ತಿರುವ ಸರ್ಕಾರಿ ಬಸ್ ಸರ್ಕಾರಿ ಆದೇಶವಾದ ” ಸರ್ಕಾರಿ ಬಸ್ ಚಾಲಕರುಗಳು ” ಬಸ್ ಚಾಲನೆ ಮಾಡುವಾಗ ” ಮೊಬೈಲ್ ಬಳಕೆ ” ನಿಷೇಧ ಸರ್ಕಾರ ಸುತ್ತೋಲೆ ಜಾರಿಯಲ್ಲಿದ್ದರೂ, ಕಾರವಾರ ದಿಂದ ಭದ್ರಾವತಿ ದಿನಾಂಕ 02/02/2025 ರಂದು
ಬೆಳಗ್ಗೆ ಸುಮಾರು 9-15 ಕ್ಕೆ ತಾಳಗುಪ್ಪದಿಂದ ಹೊರಟಿದ್ದು
” KA 17 F 1747 ” ಬಸ್ ಚಾಲಕ ನಿರಂತರವಾಗಿ ಒಂದೇ ಕೈಯಲ್ಲಿ ಸ್ಟೇರಿಂಗ್ ಹಿಡಿದು ಸರ್ಕಾರಿ ಬಸ್ ಚಾಲನೆ ಮಾಡುತ್ತಿರುವ ಚಾಲಕನ ವಿರುದ್ಧ ಪ್ರಜ್ಞಾವಂತ ಸಾಮಾಜಿಕ ಜಾಲತಾಣ ನೆಟ್ಟಿಗರು ಬಸ್ಸಿನಲ್ಲಿರುವ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಸರ್ಕಾರದ ಸಾರಿಗೆ ಅಧಿಕಾರಿಗಳು ಪ್ರಯಾಣಿಕರ ಜೀವ ಜೀವನ ಜೊತೆ ಚಲ್ಲಾಟವಾಡುತ್ತಿರುವ ಸದರಿ ಸರ್ಕಾರಿ ಬಸ್ ಚಾಲಕನ ವಿರುದ್ಧ ಸೇವೆಯಿಂದ ಅಮಾನತ್ತು ಆದೇಶ ಹೊರಡಿಸಿ ಇನ್ಮುಂದೆ ಇಂತಹ ಪ್ರಕರಣಗಳು ಜರುಗದಂತೆ ಸೂಕ್ತ ಕ್ರಮಕ್ಕೆ ಸರ್ಕಾರ ಆದೇಶಿಸಲಿ ಎಂದು ಕೇಳಿಕೊಂಡಿದ್ದಾರೆ.