ಡೈಲಿ ವಾರ್ತೆ: 07/ಫೆ. /2025

ಕೋಟ| ವೈದ್ಯಕೀಯ ನೆರವು ಹಸ್ತಾಂತರ

ಕೋಟ| ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ನ ಪ್ರಾಯೋಜಕತ್ವದಲ್ಲಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಮುಖೇನ ಕೋಡಿ ಗ್ರಾಮ ನಿವಾಸಿ ಶ್ರೀ ಶ್ರೀನಿವಾಸ ಹೇಳೆ೯ ಇವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯವನ್ನು ಪಾರಂಪಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.

ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಗಳಾದ ಶ್ರೀ ಸದಾಶಿವ ಮಧ್ಯಸ್ಥ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪ, ಉಪಾಧ್ಯಕ್ಷರಾದ ಶ್ರೀ ಪಟ್ಟಾಭಿರಾಮ ಸೋಮಯಾಜಿ, ಶ್ರೀ ಸುಬ್ರಾಯ ಉರಾಳ, ಮತ್ತಿತರರು ಉಪಸ್ಥಿತರಿದ್ದರು. ಸಭಾದ ಕಾರ್ಯದರ್ಶಿ ಶ್ರೀ ಕೆ ರಾಜಾರಾಮ ಐತಾಳ ಕಾರ್ಯಕ್ರಮ ನಿರ್ವಹಿಸಿದರು.