ಡೈಲಿ ವಾರ್ತೆ: 11/ಏಪ್ರಿಲ್/2025

ಭಟ್ಕಳ| ಮುಂಡಳ್ಳಿಯ ನೀರಗದ್ದೆಯಲ್ಲಿ ಅಕ್ರಮ ಚಿರೇಕಲ್ಲು ಗಣಿಗಾರಿಕೆ ದಂಧೆ: ಕಣ್ಮುಚ್ಚಿ ಕುಳಿತ ಭ್ರಷ್ಟ ಅಧಿಕಾರಿಗಳು

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆ ವ್ಯಾಪ್ತಿಯ ಸರ್ವೇ ನಂಬರ 207/2 ಮತ್ತು ಇದೆ ಸರ್ವೇ ನಂಬರ್ ಅಕ್ಕ ಪಕ್ಕದ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತ ಆಕ್ರಮ ಚಿರೇಕಲ್ಲು ಗಣಿಗಾರಿಕೆ ದಂದೆ ರಾಜಾರೋಷವಾಗಿ ನಡೆಯುತ್ತಿದ್ದು.
ಇದರ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರಿಂದ ದೂರು ಹೋಗಿರುತ್ತದೆ.

ಆ ದೂರಿನ ಅನ್ವಯ ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ಕಾರವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು , ಕಂದಾಯ ಅಧಿಕಾರಿಗಳೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ವೇ ನಂಬರ್ 207/2 ರಲ್ಲಿ 15 ಗುಂಟೆ ಜಾಗದಲ್ಲಿ 02 ಹಾಸು (0.4ಮಿ) ಆಳ ಚಿರೇಕಲ್ಲು ತೆಗೆದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಸರ್ವೇ ನಂಬರ್ 207/2 ಭೂ ಮಾಲೀಕ ಪ್ರವೀಣ ಕಿಣಿ ಎನ್ನವ ವ್ಯಕ್ತಿಗೆ ಅಕ್ರಮ ಚಿರೇಕಲ್ಲು ತೆಗೆದ ಬಗ್ಗೆ ಲಿಖಿತ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿರುತ್ತಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ನೋಟಿಸ ತನಗೆ ತಲುಪಿದ ಕೂಡಲೇ ಅಕ್ರಮ ಚಿರೇಕಲ್ಲು ದಂದೆ ನಡೆಯುತ್ತಿದ್ದ ಜಮಿನಿನ ಮಾಲೀಕ ಪ್ರವೀಣ ಕಿಣಿ ಹೊಸ ನಾಟಕ ಒಂದು ಶುರು ಮಾಡಿಕೊಂಡು ತಾನು ಮೂರನೇ ಖಾಸಗಿ ವ್ಯಕ್ತಿ ಅರ್ಜುನ್ ಎನ್ನುವವನಿಗೆ ತನ್ನ ಜಮೀನನ್ನು ಸಮತಟ್ಟು ಮಾಡಲು ನೀಡಿದ್ದು ಅವನು ಅಕ್ರಮವಾಗಿ ಚಿರೇಕಲ್ಲು ತೆಗೆಯುತ್ತಿದ್ದಾನೆ ಎಂದು ಅರ್ಜುನ್ ನ ಮೇಲೆ ಭಟ್ಕಳ ಗ್ರಾಮೀಣ ಪೊಲೀಸರಿಗೆ ದೂರು ನೀಡುತ್ತಾನೆ. ಪೋಲೀಸರು ಜಮೀನಿನ ಮಾಲೀಕನ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿ ಅಕ್ರಮ ಚಿರೇಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಕ್ರಮ ಕೈಗೊಳ್ಳುವಂತೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ್ಳಿಗೆ ಪತ್ರ ಬರೆದು ಕ್ರಮ ಸೂಚಿಸುತ್ತಾರೆ.

ಭಟ್ಕಳ ಗ್ರಾಮೀಣ ಠಾಣೆ ಪೊಲೀಸರಿಂದ ಮಾಹಿತಿ ಪತ್ರ ಬಂದ ಹಲವು ವಾರಗಳ ನಂತರ ಕಾಟಾಚಾರಕ್ಕೆ ಎಂಬಂತೆ ಫೆಬ್ರುವರಿ 25 ರಂದು ಸಂಜೆ 6 ಗಂಟೆಗೆ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆ ವ್ಯಾಪ್ತಿಯ ಸರ್ವೇ ನಂಬರ 207/2 ಅಕ್ರಮ ಚಿರೇಕಲ್ಲು ಗಣಿಗಾರಿಕೆ ದಂದೆ ನಡೆಯುವ ಪ್ರದೇಶಕ್ಕೆ ಕಾರವಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸ್ಥಳೀಯ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಆ ಪ್ರದೇಶದಲ್ಲಿ ಅಕ್ರಮ ಚಿರೇಕಲ್ಲು ದಂದೆ ನಡೆಯುತ್ತಿರುವುದನ್ನು ಖಚಿತಪಡಿಸಿಕೊಂಡು , ಅರ್ಜುನ ಎನ್ನುವ ಖಾಸಗಿ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳಲು ಆತನ ಪೂರ್ಣ ವಿಳಾಸಕ್ಕಾಗಿ ಪುನ್ಹ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಪತ್ರ ಬರೆಯುತ್ತಾರೆ.

ಫೆಬ್ರುವರಿ 25 ರಂದು ಸಂಜೆ 6 ಗಂಟೆಗೆ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆ ವ್ಯಾಪ್ತಿಯ ಸರ್ವೇ ನಂಬರ 207/2 ಅಕ್ರಮ ಚಿರೇಕಲ್ಲು ಗಣಿಗಾರಿಕೆ ದಂದೆ ನಡೆಯುವ ಪ್ರದೇಶಕ್ಕೆ ಕಾರವಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸ್ಥಳೀಯ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ದಾಳಿ ನಡೆಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಅಲ್ಲೇ ಇದ್ದ ಚಿರೇಕಲ್ಲುನ್ನು ತೆಗೆಯುವ 2 ಯಂತ್ರಗಳನ್ನು ವಶಪಡಿಸಿಕೊಳ್ಳದೆ ಕೇವಲ ಕಾಟಾಚಾರಕ್ಕೆ ದಾಳಿ ನಡೆಸಿ
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಅರ್ಜುನ ಎನ್ನುವ ಖಾಸಗಿ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿ ಆತನ ಪೂರ್ಣ ವಿಳಾಸಕ್ಕಾಗಿ ಪುನ್ಹ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಪತ್ರ ಬರೆಯುತ್ತಾರೆ.

ಇದರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕೇವಲ ಈತನಿಗೆ ದಂಡ ವಿದಿಸಿ ಕ್ರಮ ತೆಗೆದುಕೊಂಡಿದ್ದೇನೆ ಎಂದು ಕೈತೊಳೆದುಕೊಳ್ಳಬಹುದೇ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.

ಈ ಚಿರೇಕಲ್ಲು ಗಣಿಗಾರಿಕೆ ನಡೆಸುವವರು ಮೊದಲು
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮೊದಲು ಅರ್ಜಿ ಸಲ್ಲಿಸಬೇಕು. ನಂತರ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಚಿರೇಕಲ್ಲು ಗಣಿಗಾರಿಕೆಗೆ ಆ ಸ್ಥಳ ಯೋಗ್ಯವೋ ಅಂತಾ ಪರಿಶೀಲನೆ ನಡೆಸಿ , ಅರ್ಜಿದಾರಿಂದ ರಾಯಲ್ಟಿ ಶುಲ್ಕ ತುಂಬಿಸಿಕೊಂಡು ಕಾನೂನಿನ ಪ್ರಕಾರ ಅನುಮತಿ ಕೊಡಬೇಕು. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆಯಲ್ಲಿ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತ ಆಕ್ರಮ ಚಿರೇಕಲ್ಲು ಗಣಿಗಾರಿಕೆ ದಂದೆ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದ್ದರು
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸ್ಥಳೀಯ ಅಧಿಕಾರಿಗಳಾಗಲಿ, ಕಂದಾಯ ಅಧಿಕಾರಿಗಳಾಗಲಿ ಯಾರು ಕೂಡ ಈ ಅಕ್ರಮ ಚಿರೇಕಲ್ಲು ದಂದೇಕೋರರ ವಿರುದ್ಧ ಕಾನೂನು ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಈ ಪ್ರದೇಶದಲ್ಲಿ ನೂರಾರು ಮನೆಗಳು ಇದ್ದು ಸಾವಿರಾರು ಜನರು ವಾಸವಾಗಿದ್ದಾರೆ. ಅಲ್ಲದೆ ಆ ಸ್ಥಳದ ಹತ್ತಿರದಲ್ಲೇ ಸರ್ಕಾರಿ ಪ್ರೌಢಶಾಲೆ ಕೂಡ ಇದ್ದು
ಈ ಚಿರೇಕಲ್ಲು ತುಂಬಿದ ಲಾರಿಗಳು ಮಾರ್ಗದಿಂದ ಪ್ರತಿದಿನ ಓಡಾಟದಿಂದ ದೀನನಿತ್ಯ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೂಡ ಇದರಿಂದ ತೊಂದರೆ ಉಂಟಾಗುತ್ತಿದೆ.
ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅಕ್ರಮ ಚಿರೇಕಲ್ಲು ದಂದೆಯನ್ನು ಸಂಪೂರ್ಣವಾಗಿ ಕಡಿವಾಣ ಹಾಕುತ್ತಾರೋ ಇಲ್ಲವೋ ಕಾದುನೊಡಬೇಕು.