ಡೈಲಿ ವಾರ್ತೆ: 28/ಏಪ್ರಿಲ್/2025

ಬೈಂದೂರು| ವಕ್ಫ್ ಅಧ್ಯಕ್ಷರಾದ ಅಬ್ದುಲ್ ಮುತ್ತಾಲಿ ವಂಡ್ಸೆರವರ ನೇತೃತ್ವದಲ್ಲಿ ನಡೆದ ಹಝ್ರತ್ ಗುಲ್ ಮುಹಮ್ಮದ್ ಶಾಹ ಸಬ್ರಿ ಚಿಶ್ತಿ (ರ.) ಉರೂಸ್ ಸಂಪನ್ನ

ಬೈಂದೂರು: ವಕ್ಫ್ ಅಧ್ಯಕ್ಷರಾದ ಅಬ್ದುಲ್ ಮುತ್ತಾಲಿ ವಂಡ್ಸೆರವರ ನೇತೃತ್ವದಲ್ಲಿ ನಡೆದ ಹಝ್ರತ್ ಗುಲ್ ಮುಹಮ್ಮದ್ ಶಾಹ ಸಬ್ರಿ ಚಿಶ್ತಿ (ರ.) ಉರೂಸ್ ಎ. 26 ರಂದು ಸಂಪನ್ನಗೊಂಡಿತು.

ದಿನಾಂಕ 24.04.2025 ಆರಂಭಗೊಂಡ ಹಝ್ರತ್ ಗುಲ್ ಮುಹಮ್ಮದ್ ಶಾಹ ಸಬ್ರಿ ಚಿಶ್ತಿ (ರ.) ಉರೂಸ್ ವಕ್ಫ್ ಅಧ್ಯಕ್ಷರಾದ ಅಬ್ದುಲ್ ಮುತ್ತಾಲಿ ವಂಡ್ಸೆರವರ ನೇತೃತ್ವದಲ್ಲಿ, ಅಬ್ದುಲ್ ಲತೀಫ್ ಅಲ್ ಪಾಳಲಿ ಅವರ ದುಆ ದೊಂದಿಗೆ ಪ್ರಾರಂಭಗೊಂಡಿತು.

25.04.2025 ರಂದು ರಾತ್ರಿ ಮುಖ್ಯ ಭಾಷಣಗಾರರಾಗಿ ನೌಫಾಲ್ ಸಕಾಫಿ ಕಳಸಾ, ಸೈಯ್ಯಿದ್ ಜಾಫರ್ ತಂಙಲ್ ಕೋಟೇಶ್ವರ, ಇಬ್ರಾಹಿಂ ಮಕ್ಬುಲಿ ಅಹ್ಮದ್ ರಜಾ ರತ್ನಗಿರಿ, ಮೌಲಾನ ತಾಯಾಬ್ ನೂರಿ ಭಾಗವಹಿಸಿದರು. ಉಡುಪಿ ಜಿಲ್ಲೆಯ ವಕ್ಫ್ ನ ಉಪಾಧ್ಯಕ್ಷರಾದ ಕಲ್ಕಟ್ಟ ಅಬ್ದುರಹ್ಮಾನ್ ರಜ್ವಿ ಉಸ್ತಾದ್, ಸದಸ್ಯರಾದ ಮನ್ಸೂರ್ ಇಬ್ರಾಹಿಂ ಮರವಂತೆ, ಅಬೂಬಕ್ಕರ್ ಮಾವಿನಕಟ್ಟೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉರೂಸ್ ಮುಬಾರಕ್ ನ ಕೊನೆಯ ದಿನವಾದ 26.04.2025 ರಂದು ರಾತ್ರಿ ಸಂದಲ್ ಮೆರವಣಿಗೆಯೊಂದಿಗೆ ಸಂಪನ್ನ ಗೊಂಡಿತು.

ಉರೂಸ್ ಉಸ್ತುವರಿಗಳಾದ ಸಮದ್ ಬಾಯಿ, ವಹೀದ್ ಬಾಯಿ, ಫಯಾಜ್ ಅಲಿ, ಸುಲ್ತಾನ್ ಬೈಂದೂರ್, ಖುರ್ಷಿದ್ ಹಾಗು ಊರ ಪರವೂರ ಸಾವಿರಾರು ಮಂದಿ ಪಾಲ್ಗೊನ್ಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು