




ಡೈಲಿ ವಾರ್ತೆ: 28/ಏಪ್ರಿಲ್/2025


ಗೀತಾನಂದ ಪೌಂಡೇಶನ್ ಮತ್ತು ಜನತಾ ಸಿಬ್ಬಂದಿಗಳಿಂದ
51ನೇ ವಾರದ ಸ್ವಚ್ಛತೆ ಸೇವೆ ಕಾರ್ಯ

ಕೋಟ:-ಆನಂದದ ಸೃಷ್ಟಿ 51ನೇ ವಾರ ಜನತಾ ಸಮೂಹ ಸಂಸ್ಥೆಯ ಸಾಮಾಜಿಕ ಬದ್ದತೆಯ ಅಡಿಯಲಿ ಕಾರ್ಯ ನಿರ್ವಹಿಸುತ್ತಿರುವ ಗೀತಾನಂದ ಪೌಂಡೇಶನ್ ಮತ್ತು ಜನತಾ ಸಿಬ್ಬಂದಿಗಳು ಶ್ರೀ ಆನಂದ ಸಿ ಕುಂದರ್ ಅವರ ಮಾರ್ಗದರ್ಶನದಂತೆ ಪಡುಕರೆಯಲ್ಲಿ 51ನೇ ವಾರದ ಸ್ವಚ್ಛತೆ ಸೇವೆ ನಡೆಸಿದರು. ಈ ಸಂದರ್ಭದಲ್ಲಿ ಕೋಟ ಪಡುಕೆರೆಯ ಸಮುದ್ರ ತೀರವನ್ನು ಸ್ವಚ್ಛಗೊಳಿಸಿ ಕಸವನ್ನು ಸಂಗ್ರಹಿಸಲಾಯಿತು.
ಸ್ವಚ್ಛತೆ ಸೇವೆಯ ನಂತರ ಕಡಲ ತೀರದಲ್ಲಿ ಸರಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಪರಿಸರ ಜಾಗ್ರತಿಯ ಬೃಹತ್ ಬಿತ್ತಿ ಚಿತ್ರವನ್ನು ಸಂಸ್ಥೆಯ ಪ್ರವರ್ತಕರಾದ ಆನಂದ ಸಿ ಕುಂದರ್ ಅವರ 77ನೇ ಹುಟ್ಟಿದ ಹಬ್ಬದ ಮತ್ತು 50ವಾರಗಳ ಆನಂದ ಸೃಷ್ಟಿ ಕಾರ್ಯಕ್ರಮದ ಸವಿ ನೆನಪಿನ ಕಾಣಿಕೆಯಾಗಿ ಅವರ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿವೇಕ್ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರಾದ ಜಗದೀಶ್ ನಾವಡ, ಜನತಾ ಸಮೂಹ ಸಂಸ್ಥೆಗಳ ನಿರ್ದೇಶಕರುಗಳಾದ ಪ್ರಶಾಂತ್ ಕುಂದರ್, ರಕ್ಷಿತ್ ಕುಂದರ್, ಕೋಟ ಪಂಚಾಯತ್ ಉಪಾಧ್ಯಕ್ಷರಾದ ಪಾಂಡು ಪೂಜಾರಿ, ಸದಸ್ಯರಾದ ಪ್ರದೀಪ್ ಪಡುಕೆರೆ, ಸ್ಥಳೀಯ ಮತ್ಸ್ಯವೋದ್ಯಮಿ ಪ್ರಭಾಕರ್ ಎಚ್ ಕುಂದರ್ ಕುಟುಂಬ ಸದಸ್ಯರುಗಳಾದ ದಿವ್ಯಲಕ್ಷ್ಮಿ ಪ್ರಶಾಂತ್ ಕುಂದರ್ ವೈಷ್ಣವಿ ರಕ್ಷಿತ್ ಕುಂದರ್ ಮತ್ತು ಜನತಾ ಸಂಸ್ಥೆಯ ಎ ಜಿ ಎಂ ಶ್ರೀನಿವಾಸ್ ಕುಂದರ್, ವ್ಯವಸ್ಥಾಪಕರುಗಳಾದ ಮಿಥುನ್ ಕುಮಾರ್ ಸಂತೋಷ್ ಉಪಸ್ಥಿತರಿದ್ದರು. ಗೀತನಾದ ಸಂಸ್ಥೆಯ ದೀಕ್ಷಿತ ನಿರೂಪಿಸಿ ರವಿಕಿರಣ್ ಕೋಟ ವಂದಿಸಿದರು