



ಡೈಲಿ ವಾರ್ತೆ: 25/MAY/2025


ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ –
ವೈದ್ಯಕೀಯ ನೆರವು ಹಸ್ತಾಂತರ

ಸಾಲಿಗ್ರಾಮ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಮುಖೇನ ಪಾರಂಪಳ್ಳಿ ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಚಿತ್ರಪಾಡಿ ಗ್ರಾಮದ
ಶ್ರೀ. ನರಸಿಂಹ ಮಧ್ಯಸ್ಥರ ಮಗಳು ಶ್ರೀಮತಿ ಶ್ರೀಲತಾ ರವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯದ ಚೆಕ್ಕನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.

ಟ್ರಸ್ಟಿಗಳಾದ ಶ್ರೀ ಪಾರಂಪಳ್ಳಿ ಸದಾಶಿವ ಮಧ್ಯಸ್ಥ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪ, ಉಪಾಧ್ಯಕ್ಷರಾದ ಶ್ರೀ ಪಟ್ಟಾಭಿರಾಮ ಸೋಮಯಾಜಿ, ಶ್ರೀ ಸುಬ್ರಾಯ ಉರಾಳ, ಕಾರ್ಯದರ್ಶಿ ಶ್ರೀ ಕೆ ರಾಜಾರಾಮ ಐತಾಳ, ಪಲಾನುಭವಿಯ ತಂದೆ ಶ್ರೀ ನರಸಿಂಹ ಮಧ್ಯಸ್ಥ ಮತ್ತಿತರರು ಉಪಸ್ಥಿತರಿದ್ದರು.