ಡೈಲಿ ವಾರ್ತೆ: 31/MAY/2025

ಕೋಟೇಶ್ವರ ಪಿಡಿಒ ಬೇಜವಾಬ್ದಾರಿ
ಜಲಾಶಯವಾಗಿ ಮಾರ್ಪಟ್ಟ ಮನೆಯಂಗಳ

ಕುಂದಾಪುರ : ಮಳೆಗಾಲದಲ್ಲಿ ಸಾರ್ವಜನಿಕರ, ವಠಾರದ ನಿವಾಸಿಗಳ ರಕ್ಷಣೆಗೆ ಆದ್ಯತೆ ನೀಡಬೇಕಾಗಿರುವ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಪವಾದವಾಗಿ ಪಿಡಿಒ ಒಬ್ಬರು ನಿಂತ ಮಳೆ ನೀರನ್ನು ಕೆಳ ಭಾಗದಲ್ಲಿ ರುವ ಮನೆ ಹಿತ್ತಲಿಗೆ ಹರಿಸಿ ಮನೆಯವರಲ್ಲಿ ಆತಂಕ ಸ್ರಷ್ಟಿಸಿರುವರ ಘಟನೆ ಯೊಂದು ಕೋಟೇಶ್ವರದ ಬಡಾಕೆರೆಯಲ್ಲಿ ನಡೆದಿದೆ.

ಕೋಟೇಶ್ವರದ ಬಡಾಕೆರೆಯ ನಿವಾಸಿಯಾಗಿರುವ ರಂಗನಾಥ ಹತ್ವಾರ್ ಅವರ ಮನೆಯು ಮನೆಯು ತಗ್ಗು ಪ್ರದೇಶ ದಲ್ಲಿದ್ದು, ತುಸು ಮೇಲ್ಗಡೆ ಚರಂಡಿ ಇಲ್ಲದೆ ಪಂಚಾಯತ್ ನಿಂದ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯು ಇದೆ. ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ಅವರ ಮನೆ ಮುಂಭಾಗದ ಎತ್ತರ ಪ್ರದೇಶದಲ್ಲಿ ನೀರು ಶೇಖರ ಗೊಂಡಿದ್ದು, ಅಲ್ಲಿಗೆ ಆಗಮಿಸಿದ ಕೋಟೇಶ್ವರ ಪಂಚಾಯತ್ ನ ಪಿ ಡಿ ಒ ದಿನೇಶ್ ಹುದ್ದಾರ್ ಅವರು, ರಂಗನಾಥ ಅವರ ಆಕ್ಷೇಪಣೆ ನಡುವೆಯೂ ಏಕಾಏಕಿ ಅವರ ಮನೆ ಇರುವ ದಿಕ್ಕಿಗೆ ನೀರು ಹರಿದು ಬರುವ ಹಾಗೆ ಆಕ್ರಮವಾಗಿ ಒತ್ತುವರಿ ಮಾಡಿದ್ದಾರೆ.

ಇದರಿಂದ ರಭಸವಾಗಿ ಹರಿದು ಬಂದ ನೀರು ರಂಗನಾಥ ಅವರ ಮನೆಯಂಗಳದಲ್ಲಿ ಶೇಖರಗೊಂಡಿದ್ದು, ಮೋಟಾರು ಶೆಡ್ ಒಳಗೆ ತುಂಬಿ ಸಹ ಅಪಾಯಕಾರಿಯಾಗಿ ಪರಿಣಸಿದೆ. ಈ ಸಂದರ್ಭದಲ್ಲಿ ವಸ್ತು ಸ್ಥಿತಿಯನ್ನು ಪಿಡಿಒ ಗಮನಕ್ಕೆ ತರಲು ಯತ್ನಿಸಿದರೂ ಅದನ್ನು ಗಣನೆಗೆ ತೆಗೆದು ಕೊಳ್ಳದ ಪಿಡಿಒ ಅಲ್ಲಿಂದ ಹೊರಟು ಹೋಗಿದ್ದಾರೆ. ರಾತ್ರಿಯಿಡಿ ಆತಂಕದಿಂದ ಜಾಗರಣೆ ಮಾಡಿ ಕಳೆದ ರಂಗನಾಥ ಮನೆಯವರು ತಮ್ನನ್ನು ರಕ್ಷಿಸುವಂತೆ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಮೊರೆ ಹೋಗಿದ್ದಾರೆ.
ಚರಂಡಿ ಇಲ್ಲದೆ ಕಾಂಕ್ರಿಟ್ ರಸ್ತೆ ನಿರ್ಮಿಸಿದ ಪಂಚಾಯತ್ ಮೊದಲು ಯಡವಟ್ಟು ಮಾಡಿಕೊಂಡಿದ್ದು ಇದೀಗ ಪಿಡಿಒ ಅವರು ಖಾಸಗಿ ಜಾಗಕ್ಕೆ ಅಕ್ರಮ ವಾಗಿ ಮಳೆ ನೀರನ್ನು ಹರಿಸಿ ದರ್ಪ ಮೆರೆದಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.