



ಡೈಲಿ ವಾರ್ತೆ: 07/JUNE/2025


ಬೈಂದೂರು ಜಾಮಿಯಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಬೈಂದೂರು: ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಬೈಂದೂರು ಜಾಮಿಯಾ ಮಸೀದಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಜಾಮಿಯ ಮಸೀದಿಯ ಇಮಾಮ್ ತೈಯಬ್ ಹುಸೇನ್ ನೂರಿಯವರು ಈದ್ ಹಬ್ಬದ ಕುತ್’ಬಾ ಹಾಗೂ ನಮಾಜ್ ಹಾಗೂ ದುಆ ನಿರ್ವಹಿಸಿದ್ದರು.
ತಾಬಿಸ್ ರಝಾ ಬೈಂದೂರು ಸಲಾತು ಸಲಾಂಗೆ ನೇತೃತ್ವ ನೀಡಿದರು. ನಮಾಜಿಗಿಂತ ಮುಂಚಿತವಾಗಿ ಬಕ್ರಿದ್ ಹಬ್ಬದ ವಿಶೇಷತೆಯ ಬಗ್ಗೆ ಜನರ ಮನೆಮುಟ್ಟುವಂತೆ ವಿಷಯಗಳನ್ನು ತಿಳಿಸಿದರು. ಬಕ್ರೀದ್ ಹಬ್ಬವನ್ನು ಶಾಂತಿ ಸಮಾಧಾನದಿಂದ ಯಾವುದೇ ಸಮಾದಾಯದವರಿಗೆ ನೋವಾಗದಂತೆ ಆಚರಿಸಬೇಕೆಂದು ಹೇಳಿದರು.
ಶಬ್ಬೀರ್ ಬೈಂದೂರು ಮಾತನಾಡಿ ಬೈಂದೂರು ಶಾಂತಿ ಸಹೋದರತೆಯ ಊರು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಹಬ್ಬವನ್ನು ಆಚರಿಸುವಂತೆ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದರು. ಅಲ್ಲದೆ ಊರಿನ ನೂರಾರು ಮಂದಿ ಸಡಗರದ ಬಕ್ರೀದ್ ಹಬ್ಬಕ್ಕೆ ಸೇರಿದ್ದರು,ಶ. ಪರಸ್ಪರ ಹಸ್ತಲಾಗವ ಆಲಿಂಗನ ಮಾಡುವ ಮೂಲಕ ಬಕ್ರಿದ್ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ ಮುಖಂಡರುಗಳಾದ ನಾಗೂರ್ ನಾಸಿರ್ ಅಹಮದ್, ಶೇಕ್ ಜಾಫರ್ ಸಾಧಿಕ್, ಮಾವಡ್ ಅಕ್ರಮ್, ಬೈಂದೂರು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಶಬ್ಬೀರ್ ಬೈಂದೂರು ಉಪಸ್ಥಿತರಿದ್ದರು.
ಕೊನೆಯಲ್ಲಿ ಊರಿನ ಎಲ್ಲಾ ಸಮಾಜ ಬಾಂಧವರಿಗೆ ಬಕ್ರಿದ್ ಹಬ್ಬದ ಶುಭಾಶಯಗಳನ್ನು ಹೇಳುವ ಮೂಲಕ ಮಸೀದಿಯ ಕಾರ್ಯಕ್ರಮ ಕೊನೆಗೊಳಿಸಲಾಯಿತು.