ಡೈಲಿ ವಾರ್ತೆ: 07/JUNE/2025

ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವು ನಾಡಿನೆಲ್ಲಡೆ ಶಾಂತಿ ಹರಡಲಿ – ರಹಿಮಾನ್ ಬೋಳಿಯಾರ್

ಮಂಗಳೂರು: ಮುಸಲ್ಮಾನರು ಆಚರಿಸುವ ಹಬ್ಬಗಳಲ್ಲಿ ಬಕ್ರೀದ್ ಹಬ್ಬವು ಒಂದು ದೊಡ್ಡ ಹಬ್ಬವಾಗಿದೆ ಮುಸಲ್ಮಾನರು ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಅ.ಸ ರವರ ತ್ಯಾಗದ ಸಂಕೇತವಾಗಿಯು ಸೃಷ್ಟಿಕರ್ತನ ಭಕ್ತಿಯ ಅನುಸಾರವಾಗಿ ಅತ್ಯಂತ ಸಂಭ್ರಮದಿಂದ ಸಡಗರದಿಂದ ಆಚರಿಸುತ್ತಾರೆ .

ಕಳೆದ ಹಲವು ದಿನಗಳಿಂದ ಕರಾವಳಿ ಜಿಲ್ಲೆಯಲ್ಲಿ ಸಂಘಪರಿವಾರಿಗಳ ದುಷ್ಕ್ರತ್ಯದಿಂದ ಅಶಾಂತಿಯ ವಾತವರಣ ನಿರ್ಮಾಣವಾಗಿದ್ದು ಅಮಾಯಕ ಜೀವಗಳನ್ನು ಕಳೆದುಕೊಂಡಂತಹ ಕುಟುಂಬಗಳು ತನ್ನ ಮಕ್ಕಳನ್ನು ನೆನೆದು ದುಃಖದಿಂದ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದು ತುಂಬಾ ಬೇಸರ ಉಂಟುಮಾಡುತ್ತಿದೆ ನೊಂದ ಕುಟುಂಬಗಳಿಗೆ ಸೃಷ್ಟಿಕರ್ತನು ತನ್ನ ಮಕ್ಕಳ‌ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತಾ ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವು ನಾಡಿನೆಲ್ಲಡೆ ಶಾಂತಿ ಸಮದಾನ ಸಂತೋಷ ಹರಡಲಿ ಹಾಗೂ ಸರ್ವರಿಗೂ ಬಕ್ರೀದ್ ಹಬ್ಬದ ಹಾರ್ಧಿಕ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ.