



ಡೈಲಿ ವಾರ್ತೆ: 08/JUNE/2025


ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಮೇಲೆ ಮೊಕದ್ದಮೆ| ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ತೀವ್ರ ಖಂಡನೆ

ಪ್ರಜಾಪ್ರಭುತ್ವ ದೇಶದಲ್ಲಿ ಜನರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಮುಕ್ತ ಅವಕಾಶ ಇದ್ದು ಯಾವುದೇ ಒಂದು ಘಟನೆ ಬಗ್ಗೆ ಮಾತನಾಡುವುದು ಸರ್ವೇಸಾಮಾನ್ಯ ಒಂದು ಘಟನೆಯ ಬಗ್ಗೆ ವಾಟ್ಸಾಪ್ ಮ್ಯಸೇಜ್ ಮಾಡಿದ ಎಂಬ ಕಾರಣಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನರಾ ರವರ ಮೇಲೆ ಮೊಕದ್ದಮೆ ಹಾಕಿದ್ದು ಖಂಡನೀಯ ಹಾಗೂ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಆದ್ದರಿಂದ ರಾಜ್ಯ ಸರ್ಕಾರವು ಜನರ ಹಕ್ಕುಗಳನ್ನು ಕಾಪಾಡಬೇಕು ಬಿಟ್ಟರೆ ಜನರನ್ನು ಧಮನಿಸುವ ಹಾಗೂ ಕಾನೂನಿನ ಮೂಲಕ ಹೆದರಿಸುವ ಪ್ರಕ್ರಿಯೆಯನ್ನು ಬಿಡಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಅಗ್ರಹಿಸುತ್ತಿದೆ.