



ಡೈಲಿ ವಾರ್ತೆ: 08/JUNE/2025


ಬೆಂಗಳೂರು ಕಾಲ್ತುಳಿತ ಪ್ರಕರಣ – ಬಿಜೆಪಿ, ಜೆಡಿಎಸ್ ರಾಜಕೀಯ ಲಾಭಕ್ಕಾಗಿ ಉಪಯೋಗಿಸಿ ಕೊಂಡಿರುವುದು ದುರದೃಷ್ಟಕರ – ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ

ಇತ್ತೀಚೆಗೆ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಗೆ ಸಂಬಂಧಿಸಿದಂತೆ , ಕೆಲವು ರಾಜಕೀಯ ಪಕ್ಷಗಳು – ವಿಶೇಷವಾಗಿ ಬಿಜೆಪಿ ಹಾಗೂ ಜೆಡಿಎಸ್ – ತಕ್ಷಣದ ಮಾನವೀಯ ಪ್ರತಿಕ್ರಿಯೆ ನೀಡಿ ದುಃಖವನ್ನು ಹಂಚಿಕೊಳ್ಳುವ ಬದಲಿಗೆ, ಈ ಸಮಸ್ಯೆಯನ್ನೂ ರಾಜಕೀಯ ಲಾಭಕ್ಕಾಗಿ ಉಪಯೋಗಿಸಿಕೊಂಡಿರುವುದು ದುರದೃಷ್ಟಕರವಾಗಿದೆ.
ಅಮಾಯಕರ ಪ್ರಾಣ ಹಾನಿಯಾದಂತಹ ಸಮಯದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಂದ ದೂರ ಉಳಿದು, ಬದಲಿಗೆ ಸೂಕ್ತ ಶಿಸ್ತು, ಭದ್ರತೆ ಹಾಗೂ ಸಾರ್ವಜನಿಕ ವ್ಯವಸ್ಥೆಗಳ ಬಲವರ್ಧನೆಗೆ ಒತ್ತಾಯಿಸಬೇಕಾಗಿತ್ತು. ಆದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಾವು ಈ ದೇಶದ ಸಾಂವಿಧಾನಿಕ ಕಾರ್ಯಪಥವನ್ನು ಬಿಟ್ಟು, ಜನರ ದುಃಖವನ್ನು ರಾಜಕೀಯ ಆಯುಧವನ್ನಾಗಿ ಪರಿವರ್ತಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ರಾಜಕೀಯ ಒಗ್ಗಟ್ಟಿನಿಂದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿರುವ ಈ ಸಮಯದಲ್ಲಿ, ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕೇವಲ ಅಭಿಪ್ರಾಯಗಳ ಯುದ್ಧವನ್ನೇ ಇಳಿಸಿದಂತಾಗಿದೆ.
ಮಾನವೀಯತೆ ಮೊದಲು, ರಾಜಕೀಯ ನಂತರ ಎಂಬ ಆದರ್ಶವೊಂದನ್ನು ಎಲ್ಲ ಪಕ್ಷಗಳು ಪಾಲಿಸಬೇಕಿದೆ ಎಂದು ರಾಜ್ಯ ಯುವ ಕಾಂಗ್ರೆಸ್
ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.