



ಡೈಲಿ ವಾರ್ತೆ: 10/JUNE/2025


ಉಡುಪಿ: ನಾಯಿಗೆ ವಿಷ ಹಾಕಿ ಕೊಂದ ಪ್ರಕರಣ – ಆರೋಪಿಗಳ ಸುಳಿವು ಕೊಟ್ಟರೆ 50 ಸಾವಿರ ರೂ.ಬಹುಮಾನ – ಪೆಟಾ ಸಂಸ್ಥೆ ಘೋಷಣೆ

ಕಾರ್ಕಳ: ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿ ಮರ್ಣೆಯಲ್ಲಿ ನಾಯಿಗೆ ವಿಷ ಹಾಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಪೆಟಾ (ಪೀಪಲ್ ಫಾರ್ ಎಥಿಕಲ್ ಟೀಟ್ಮೆಂಟ್ ಆಫ್ ಎನಿಮಲ್ಸ್ – ಪ್ರಾಣಿ ದಯಾ ಸಂಘ) ಸಂಸ್ಥೆ ಆರೋಪಿಗಳ ಸುಳಿವು ಕೊಟ್ಟವರಿಗೆ 50 ಸಾವಿರ ರೂ.ಬಹುಮಾನ ಘೋಷಣೆ ಮಾಡಿದೆ.
ಜೂ.6 ರಂದು ವಿಷ್ಣುಮೂರ್ತಿ ದೇವಸ್ಥಾನ ಪರಿಸರದಲ್ಲಿ ನಾಯಿ ಮೃತಪಟ್ಟ ಸ್ಥಿತಿಯಲ್ಲಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ನಾಯಿಗೆ ವಿಷ ಉಣಿಸಿರುವುದು ದೃಢಪಟ್ಟಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪ್ರಕರಣ ಮಾಹಿತಿ ಪಡೆದ ಪೆಟಾ ಸಂಸ್ಥೆಯು ಪೊಲೀಸ್ ಇಲಾಖೆಯ ಶ್ಲಾಘಿಸಿದ್ದು, ನಾಯಿಗೆ ವಿಷ ಉಣಿಸಿದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದಲ್ಲಿ 50 ಸಾವಿರ ಬಹುಮಾನ ಘೋಷಿಸಿದೆ. ಈ ಮಾಹಿತಿಯನ್ನು ಗೋಪ್ಯವಾಗಿಡಲಾಗುವುದು ಎಂದು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.