



ಡೈಲಿ ವಾರ್ತೆ: 14/JUNE/2025


ಅಂಕೋಲಾ| ಮನೆ ಯೊಳಗೆ ಅವಿತುಕೊಂಡ ಚಿರತೆ – ಯುವಕನ ಮೇಲೆ ದಾಳಿ, ಗ್ರಾಮಸ್ಥರಲ್ಲಿ ಆತಂಕ

ವಿದ್ಯಾಧರ ಮೊರಬಾ
ಅಂಕೋಲಾ: ಯುವಕನೊಬ್ಬನು ಚಿರತೆ ದಾಳಿಗೆ ಒಳಗಾದ ಘಟನೆ ತಾಲೂಕಿನ ವಾಸರಕುದ್ರಿಗೆ ಗ್ರಾ.ಪಂ. ವ್ಯಾಪ್ತಿಯ ಉಳಗದ್ದೆ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಸಂತೋಷ ಹೂವಣ್ಣ ಗೌಡ (24) ಚಿರತೆ ದಾಳಿಗೆ ಒಳಗಾದ ಯುವಕ.
ಮನೆಯ ಪಕ್ಕದ ಹೊಸ ಮನೆಯಲ್ಲಿ ಚಿರತೆ ಅವಿತುಕೊಂಡಿದ್ದು ಎನ್ನಲಾಗಿದೆ.
ಆ ಮನೆಯಲ್ಲಿಟ್ಟಿರುವ ಬಟ್ಟೆ ತರಲೋ ಹೋದ ಯುವತಿಯೋರ್ವಳು ಚಿರತೆಯನ್ನು ಕಂಡು ಬೊಬ್ಬೆ ಹೊಡೆದ ಶಬ್ಧಕ್ಕೆ ಅಲ್ಲಿಂದ ಹೊರಗಡೆ ಬಂದಿದೆ. ಆ ಕ್ಷಣದಲ್ಲಿ ಸಂತೋಷ ಗೌಡನು ಮನೆಯಿಂದ ಹೊರಗಡೆ ಬರುತ್ತಿರುವ ಸಂದರ್ಭದಲ್ಲಿ ಆತನ ಮೇಲೆ ಚಿರತೆ ದಾಳಿ ಮಾಡಿದೆ.
ದಾಳಿಯ ಪರಿಣಾಮವಾಗಿ 2 ಕೈಗಳಿಗೆ ಪರಚಿದ ಗಾಯಗಳಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾನೆ.
ಆತನ ಕುಟುಂಬದವರು ಕೂಡಲೇ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಪಿಐ ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಿರತೆಯೊಂದು ಮನೆಯೊಗಳಗೆ ಪ್ರವೇಶಿಸಿ ಮನುಷ್ಯರ ಮೇಲೆ ದಾಳಿ ಮಾಡಿರುವುದನ್ನು ನಮ್ಮೆಲ್ಲರಿಗೆ ಆತಂಕ ಹೆಚ್ಚಿಸಿದ್ದು, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಮುಂದೆ ಮತ್ತೆ ಹೀಗಾಗದಂತೆ ಸೂಕ್ತ ಕ್ರಮಕೈಗೊಂಡು ಜನರನ್ನು ಮತ್ತು ಜಾನುವಾರಗಳನ್ನು ರಕ್ಷಣೆ ಮಾಡಿಲಿ ಎಂದು ಅಗಸೂರು ಗ್ರಾ.ಪಂ. ಸದಸ್ಯ ಆನಂದು ಗೌಡ ಆಗ್ರಹಿಸಿದ್ದಾರೆ.