



ಡೈಲಿ ವಾರ್ತೆ: 16/JUNE/2025


ಉಡುಪಿ ಜಿಲ್ಲಾ ನೂತನ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಹರಿರಾಂ ಶಂಕರ್ ಅವರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು

ಉಡುಪಿ: ಜಿಲ್ಲಾ ನೂತನ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಹರಿರಾಂ ಶಂಕರ್ ರವರನ್ನು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಸಿ ಹೆಚ್ ಅಬ್ದುಲ್ ಮುತ್ತಲಿ ವಂಡ್ಸೆ, ಉಪಾಧ್ಯಕ್ಷರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹಾಗೂ ಸಲಹಾ ಸಮಿತಿ ಸದಸ್ಯರಾದ ಮನ್ಸೂರ್ ಮರವಂತೆ ಹೂ ಗುಚ್ಛ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ, ಸಮಾದಾನ ಹಾಗೂ ಭಾವೈಕ್ಯತೆ ಸದಾ ನೆಲೆ ನಿಲ್ಲಬೇಕು, ವಕ್ಫ್ ಬಗ್ಗೆ ಇರುವ ತಪ್ಪು ಭಾವನೆಗಳನ್ನು ಹೊಗಲಾಡಿಸುವಲ್ಲಿ ತಾವು ಮುಂದಾಗಬೇಕು
ನಮ್ಮ ಸಮುದಾಯದ ಅಭಿವೃದ್ಧಿಗೆ ನಿಮ್ಮ ಸಹಕಾರ ಅಗತ್ಯ ಎಂದು ವಕ್ಫ್ ನಿಯೋಗ ವರಿಷ್ಠಾಧಿಕಾರಿಯವರಿಗೆ ಮಾನವಿ ಮಾಡಿದರು.