ಡೈಲಿ ವಾರ್ತೆ: 21/JUNE/2025

ಸಾಲಿಗ್ರಾಮ| ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು!

ಸಾಲಿಗ್ರಾಮ: ಮಣಿಪಾಲದಲ್ಲಿ ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಯುವಕ ನೋರ್ವ ಚಿಕಿತ್ಸೆ ಫಲಿಸದೆ ಇಂದು ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.

ಮೃತಪಟ್ಟ ಯುವಕ ಸಾಲಿಗ್ರಾಮದ ನಿವಾಸಿ ಆಸ್ತಿಕ್ ಮೆಂಡನ್ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ತಲೆಗೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಒಂದು ವಾರದಿಂದ ಕೋಮು ಸ್ಥಿತಿಯಲ್ಲಿದ್ದು ಶನಿವಾರ ಬೆಳಿಗ್ಗೆ ಅಸುನಿಗಿರುತ್ತಾರೆ. ಮಣಿಪಾಲದ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು ತಂದೆ ತಾಯಿ ಸಹೋದರನನ್ನು ಅಗಲಿದ್ದಾರೆ.
ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.