ಡೈಲಿ ವಾರ್ತೆ: 22/JUNE/2025

ಅಪರಿಚಿತ ವಾಹನ ಡಿಕ್ಕಿ (ಹಿಟ್ & ರನ್‌ಗೆ) ಎಎಸ್ಐ ಬಲಿ!

ಧಾರವಾಡ: ಬೈಕ್ ಅಪಘಾತ ಸಂಭವಿಸಿ ಡಿಆರ್‌ ಎಎಸ್‌ಐ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಇಟಿಗಟ್ಟಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಎಲ್ಲಪ್ಪ ಕುಂಬಾರ್ ಎಂಬುವವರೇ ಮೃತ ದುರ್ದೈವಿ. ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬೈಕ್‌ನಲ್ಲಿ ಹೊರಟಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ಈ ವೇಳೆ ಬೈಕ್ ಮೇಲಿದ್ದ ಯಲ್ಲಪ್ಪ ಅವರ ತಲೆಗೆ ಗಂಭೀರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ‌. ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.