ಡೈಲಿ ವಾರ್ತೆ: 23/JUNE/2025

ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನ.!

ಪ್ರಧಾನ ಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯು ಕೇಂದ್ರ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, ಇದರಲ್ಲಿ ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ದಗೊಳಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹೊಸ ಮತ್ತು ಚಾಲ್ತಿಯಲ್ಲಿರುವ ಆಹಾರ ಸಂಸ್ಕರಣಘಟಕ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 50% ಸಹಾಯಧನ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಯೋಜನೆಗೆ ಸಾಕಷ್ಟು ಅವಕಾಶಗಳಿದ್ದು, ಉದ್ದಿಮೆದಾರರು ಈ ಯೋಜನೆಯ ನೆರವನ್ನು ಪಡೆದು ಸ್ವ ಉದ್ಯಮವನ್ನು ಸ್ಥಾಪಿಸಬಹುದಾಗಿದೆ.
ಸದರಿಯೋಜನೆಯಡಿ ಫಲಾನುಭವಿಗಳಾಗಲು ಅಥವಾ ಈ ಯೋಜನೆಯ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ಅರ್ಹ ಕೆಲವು ಉದ್ಯಮಗಳಾವುವೆಂದರೆ
ಕಾಫಿ ಪುಡಿ ಸಂಸ್ಕರಣಾಯಂತ್ರ, ಚಾಕೊಲೇಟ್ ತಯಾರಿಸುವ ಯಂತ್ರ, ಜಾಮ್ ಜಿಲಿಸ್ಟ್ ತಯಾರಿಕ ಯಂತ್ರ, ಬೇಕರಿ ಘಟಕ, ಸ್ಪೆಷಲ್ ಬಿಸ್ಟೋಟ್ಸ್ ಮತ್ತು ಕುಕೀಸ್ ತಯಾರಿಸುವುದು. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ರಾಗಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ಎಣ್ಣೆತೆಗೆಯುವ ಯಂತ್ರ (ತೆಂಗಿನಎಣ್ಣೆೆ, ಸೂರ್ಯಕಾಂತಿ, ಎಳ್ಳು, ಹರಳು, ಕಡಲೆ, ಕುಸುಬೆ, ಇತ್ಯಾದಿ). ಉಪ್ಪಿನ ಕಾಯಿ ಮಾಡುವಯಂತ್ರ ಘಟಕ, ಮಸಾಲ ಪುಡಿ ಮಡುವಯಂತ್ರ, ಹಸಿಮೆಣಸು ಪೇಸ್ಟ್ ಮಾಡುವಯಂತ್ರ, ತರಕಾರಿಗಳನ್ನು ಕತ್ತರಿಸಿ ಪ್ಯಾಕಿಂಗ್ ಮಾಡುವುದು, ಡಿಹೈಡಾಟೆಡ್ ತರಕಾರಿಗಳು, ಸಾಸ್ ಮತ್ತು ಕೆಜಿಪ್‌ತಯಾರಿಕೆ, ನಿಂಬೆ, ಕಿತ್ತಳೆಯಂತಹ ಹುಳಿ ಹಣ್ಣುಗಳ ಸಂಸ್ಕರಣೆ, ಸೊಪ್ಪಿನಪುಡಿಗಳು (ಕರಿಬೇವು, ನುಗ್ಗೆಸೊಪ್ಪು, ಮೆಂತ್ಯಸೊಪ್ಪು, ಪುದಿನಸೊಪ್ಪುಇತರ…) ಸಂಬಾರ ಪದಾರ್ಧಗಳ ಸಂಸ್ಕರಣೆ (ಮೆಣಸು, ಏಲಕ್ಕಿ, ಶುಂಠಿ ಇತ್ಯಾದಿ) ಬೇಕರಿ ಉತ್ಪನ್ನಗಳು, ಚಿಪ್ಸ್ ಮಾಡುವ ಮಿಷನ್ (ಬಾಳೆ, ಹಲಸು, ಗೆಣಸುಇತ್ಯಾದಿ)ಹಪ್ಪಳ / ಪಾಪಡ್ ಮಾಡುವ ಮೆಷಿನ್, ರೊಟ್ಟಿ ಮಾಡುವ ಮೆಷಿನ್, ನೂಡಲ್ಸ್ ಶಾವಿಗೆ ಮೆಷಿನ್, ಜ್ಯೂಸ್ ಪ್ರೊಸೆಸಿಂಗ್ ಮೆಷಿನ್, ರವಾ ಮಾಡುವ ಮೆಷಿನ್, ದಾಲ್ ಮಾಡುವಮಷಿನ್, ಆಣಬೆ ಬೇಸಾಯ ಮತ್ತು ಮೌಲ್ಯವರ್ದಿತ ಉತ್ಪನ್ನಗಳ ತಯಾರಿಕೆ, ಜೇನು ಸಂಸ್ಕರಣೆಘಟಕ ಪ್ರಾದೇಶಿಕ ವಿಶೇಷತೆ ಹೊಂದಿರುವ ಹಣ್ಣುಗಳ ಸ್ಕ್ಯಾಸ್ ಮತ್ತುಜ್ಯೂಸ್‌ ತಯಾರಿಸುವುದು.
ಅರಣ್ಯ ಉತ್ಪನ್ನಗಳು. ಆರಿಶಿನ, ನೆಲ್ಲಿಕಾಯಿ, ಹುಣಸೆ, ಕಾಚಿಪುಳಿ/ಪುನರ್ ಪುಳಿ ಮುಂತಾದ ಸಾಂಪ್ರದಾಯಿಕ ಭಾರತೀಯಗಿಡಮೂಲಿಕೆ ಖಾದ್ಯ ವಸ್ತುಗಳ ತಯಾರಿಕೆ ಮತ್ತು ಸಂಸ್ಕರಣೆ. ವಿವಿಧರೀತಿಯ ಹಲವ (ಸೀಬೆಹಣ್ಣು ಮತ್ತು ಬಾಳೆ ಹಣ್ಣು,) ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಬೆಣ್ಣೆತುಪ್ಪ, ಪನೀರ್, ಐಸ್‌ಕ್ರೀಮ್, ಕುಲ್ಪಿ, ತಯಾರಿಕಾಘಟಕ, ಮಾಂಸ (ಕುರಿ, ಹಂದಿ, ಕೋಳಿ) ಮತ್ತು ಒಣಮೀನು ತಯಾರಿಕೆ, ಮೀನು ಸಂಸ್ಕರಣೆ ಮಾಡುವ ಮೆಷಿನ್, ಮಾಂಸ (ಕುರಿ, ಹಂದಿ, ಕೋಳಿ) ಮತ್ತು ಮೀನು ಕಟಿಂಗ್ ಮತ್ತುಕ್ಲೀನಿಂಗ್ ಮಾಡುವುದು. ಮಾಂಸ (ಕುರಿ, ಹಂದಿ, ಕೋಳಿ) ಮತ್ತು ಮೀನು ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆ.
ಕೋಲ್ಡ್ ಸ್ಟೋರೇಜ್, ಆಹಾರ ಸಂಸ್ಕರಣೆಗೆ ಸೋಲಾರ್‌ಡ್ರೈಯರ್ ಯೂನಿಟ್‌ಗಳ ಅಳವಡಿಕೆ. ಸಾಗರೋತ್ಪನ್ನ ಉತ್ಪನ್ನಗಳು, ಮಸಾಲ ಪದಾರ್ಥಗಳು, ಪಶು ಆಹಾರತಯಾರಿಕೆ, ಮೈನರ್ ಮಿಲೆಟ್ ಪೌಡರ್‌ಘಟಕತಯಾರಿಕೆ, ಇನ್ನೂ ಹಲವಾರು ಉದ್ಯಮದವರು ಈ ಯೋಜನೆಯ ಫಲಾನುಭವಿಗಳು, ಇದರ ಸದುಪಯೋಗ ಪಡೆದುಕೊಳ್ಳಲು ಅವಕಾಶಗಳಿವೆ.

ಹೆಚ್ಚಿನಮಾಹಿತಿಗಾಗಿ – ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಅಥವಾ ಡಾ. ರಾಜೇಶ್ ಡಿ.ಪಿ.,
ಜಿಲ್ಲಾ ಸಂಪನ್ಮೂಲ ವ್ಯಕ್ತಿ(DRP)ಅವರನ್ನು ಸಂಪರ್ಕಿಸಿ :-
ಡಾ. ರಾಜೇಶ್ ಡಿ ಪಿ,
8453782414