



ಡೈಲಿ ವಾರ್ತೆ: 29/JUNE/2025


ಕುಂಜಾಲಿನಲ್ಲಿ ಗೋವಿನ ಕಳೆಬರಹ ಎಸೆದ ಕಿಡಿಗೇಡಿಗಳು: ಕುಂಜಾಲು ಮುಸ್ಲಿಂ ಜಮಾತ್ ಬಾಂಧವರಿಂದ ಖಂಡನೆ

ಬ್ರಹ್ಮಾವರ: ಕುಂಜಾಲು ಬಸ್ ನಿಲ್ದಾಣ ಸಮೀಪ ಗೋವಿನ ಕಳೆಬರಹಗಳನ್ನು ರಸ್ತೆಗೆ ಎಸೆದಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಸೌಹಾರ್ದತೆಯಲ್ಲಿರುವ ಈ ಕುಂಜಾಲು ಭಾಗದಲ್ಲಿ ಕಿಡಿಗೇಡಿಗಳು ನಡೆಸಿದ ಈ ದುಷ್ಕೃತ್ಯವನ್ನು ಕುಂಜಾಲಿನ ಮುಸ್ಲಿಂ ಭಾಂದವರು ಖಂಡಿಸುತ್ತಾರೆ.
ಈ ಭಾಗದಲ್ಲಿ ಇರುವ ಹಿಂದೂ, ಮುಸ್ಲಿಮರ ಅನೋನ್ಯತೆ ಸಹೋದರತೆಯನ್ನು ಮತ್ತು ಶಾಂತಿಯನ್ನು ಕದಡಲು ಈ ರೀತಿ ಮಾಡುತ್ತಿರುವ ಬಗ್ಗೆ ಅನುಮಾನ ಮೂಡುತ್ತಿದ್ದು ಇಂತಹ ಘಟನೆ ಮರುಕಳಿಸದೆ ಇರಲು ದುಷ್ಕರ್ಮಿಗಳನ್ನು ತಕ್ಷಣ ಬಂದಿಸುವಂತೆ ಹಾಗೂ ಮುಖ್ಯ ರಸ್ತೆಗಳ ಭಾಗದಲ್ಲಿ ಸಿಸಿ ಕ್ಯಾಮರ ಆಳವಡಿಸುವಂತೆ ಸಮಸ್ತ ಕುಂಜಾಲಿನ ಮುಸ್ಲಿಂ ಭಾಂದವರ ಪರವಾಗಿ ನೂರ್ ಜುಮ್ಮಾ ಮಸೀದಿ ಸಮಿತಿ ಆಗ್ರಹಿಸಿದೆ.
ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದೆ ಯಾವುದೇ ಸಂಘಟನೆಗಳ ಒತ್ತಡಕ್ಕೆ ಮಣಿಯದೆ ನೈಜ ಆರೋಪಿಗಳನ್ನು ಶಿಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಬ್ರಹ್ಮಾವರ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಮಾಆತಿನ ಅಧ್ಯಕ್ಷರು ಮೊಹಮ್ಮದ್ ಶಬೀರ್, ಉಪಾದ್ಯಕ್ಷರು ಆಗಿರುವ ಸುಜಿದ್ ಖಾನ್, ಖಜಾಂಜಿ ಹಬೀಬ್ ಉಡುಪಿ, ಹಾತಿಂ ಸಾಹೇಬ್ ಕುಂಜಾಲ್ ಹಾಗೂ ಸ್ಥಳೀಯ ಮುಸ್ಲಿಂ ಭಾಂದವರು
ಉಪಸ್ಥಿತರಿದ್ದು