



ಡೈಲಿ ವಾರ್ತೆ: 29/JUNE/2025


ಕುಂಜಾಲಿನಲ್ಲಿ ದನದ ರುಂಡ ಪತ್ತೆ: ಆರೋಪಿಗಳ ಶೀಘ್ರ ಪತ್ತೆಗೆ ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ಆಗ್ರಹ

ಬ್ರಹ್ಮಾವರ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕುಂಜಾಲು ಪ್ರದೇಶದಲ್ಲಿ ದನದ ರುಂಡ ಪತ್ತೆಯಾದ ಘಟನೆಯು ತೀವ್ರ ವಿಷಾದನೀಯವಾಗಿದ್ದು ಪೊಲೀಸ್ ಇಲಾಖೆ ತಕ್ಷಣ ಘಟನೆಯ ನೈಜ ವಿಷಯವನ್ನು ಪತ್ತೆಹಚ್ಚಬೇಕು ಈ ಪ್ರಕರಣದಲ್ಲಿ ಎಲ್ಲಾದರೂ ಯಾವುದೇ ವ್ಯಕ್ತಿಗಳ ಕೈವಾಡ ಇದ್ದರೆ ಇದರ ಬಗ್ಗೆ ಕ್ರಮ ಕೈಗೊಂಡು ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು ಹಾಗೂ ಈ ಘಟನೆಯಿಂದ ಕೋಮುಸೌಹಾರ್ದತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.
ಇಂತಹ ಘಟನೆಗಳಿಂದ ಮನುಷ್ಯ ಮನಸ್ಸುಗಳು ಕೆಡದಂತೆ ಸುಸಂಸ್ಕೃತ ಸಮಾಜ ನೋಡಿಕೊಳ್ಳಬೇಕು. ಕೋಮು ಭಾವನೆಗಳು ಕೆರಳದಂತೆ ಜಾಗ್ರತೆ ವಹಿಸಬೇಕು ಹಾಗೂ ಆರೋಪಿಗಳು ಯಾರೇ ಆಗಿರಲಿ ಅವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ರಾಜಕೀಯ ಪಕ್ಷಗಳು ಇದನ್ನು ತಮ್ಮ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳದೆ ಆರೋಪಿಯನ್ನು ಆರೋಪಿಯನ್ನಾಗಿ ಗುರಿತಿಸಬೇಕು ಅದನ್ನು ಬಿಟ್ಟು ಯಾವುದೇ ಧರ್ಮವನ್ನು ತೆಗಳುವುದೂ ವಿನಾ ಕಾರಣ ಒಂದು ಧರ್ಮವನ್ನು ಇನ್ನೊಂದು ಧರ್ಮದ ಮೇಲೆ ಎತ್ತಿಕಟ್ನುವುದೂ ಮಾಡಬಾರದಾಗಿ ಮುಸ್ಲಿಂ ಜಮಾತ್ ಜಿಲ್ಲಾ ಸಮಿತಿಯು ಎಲ್ಲರಲ್ಲೂ ಕೇಳಿಕೊಳ್ಳುತ್ತಾ ಇದೆ.