


ಡೈಲಿ ವಾರ್ತೆ: 16/ಜುಲೈ/2025


ಗಂಗೊಳ್ಳಿ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಇನ್ನೊರ್ವ ಮೀನುಗಾರ ಜಗನಾಥ್ ಖಾರ್ವಿ ಮೃತದೇಹ ಹಳೆಅಳಿವೆ ಕಿನಾರದಲ್ಲಿ ಪತ್ತೆ

ಕುಂದಾಪುರ: ಗಂಗೊಳ್ಳಿ ಬಂದರಿನಿಂದ ಜು. 15 ರಂದು ಬೆಳಿಗ್ಗೆ ಮೀನುಗಾರಿಕೆಗೆ ಸಿಪಾಯಿ ಸುರೇಶ ಮಾಲೀಕತ್ವದ ದೋಣಿಯಲ್ಲಿ ನಾಲ್ಕು ಜನರು ತೆರಳಿದ್ದರು.
ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ದೋಣಿ ಮಗುಚಿದ್ದು, ಒಬ್ಬ ಮೀನುಗಾರ ಈಜಿ ದಡ ಸೇರಿದ್ದು, ಮೂವರು ಮೀನುಗಾರರು ನಾಪತ್ತೆಯಾಗಿದ್ದರು.
ನಿರಂತರ ಶೋಧ ಕಾರ್ಯದಲ್ಲಿ ರೋಹಿತ್ ಖಾರ್ವಿ ಎನ್ನುವವರ ಮೃತದೇಹ ಕೋಡಿ ಲೈಟ್ ಹೌಸ್ ಸಮುದ್ರ ತೀರದಲ್ಲಿ ಇಂದು ಬುಧವಾರ ಬೆಳಗಿನ ಜಾವ 4ಗಂಟೆಗೆ ಪತ್ತೆಯಾಗಿದ್ದು, ಮತ್ತೊರ್ವ ಜಗನಾಥ್ ಖಾರ್ವಿ(50) ಮೃತದೇಹ ಬುಧವಾರ ಸಂಜೆ ಹಳೆ ಅಳಿವೆ ಕಿನಾರದ ಸಮುದ್ರದ ತೀರದಲ್ಲಿ ಪತ್ತೆಯಾಗಿದೆ.
ಇನ್ನು ಇನ್ನೊರ್ವ ಮೀನುಗಾರ ಸುರೇಶ್ ಖಾರ್ವಿ ಮೃತದೇಹ ಪತ್ತೆಯಾಗಬೇಕಿದೆ.