ಡೈಲಿ ವಾರ್ತೆ: 26/ಜುಲೈ/2025

ಬಂಟ್ವಾಳ| ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು:
ಸಾವಿರಾರು ರೂ. ನಗದು ಕಳವು

ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಒಳನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ನಗದು ಕಳವುಗೈದ ಘಟನೆ ಸರಪಾಡಿ ಗ್ರಾಮದ ದರ್ಖಾಸು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸಂಜೆ ಬಂದಿದೆ.

ಇಲ್ಲಿನ ನಿವಾಸಿ ಅಜಿತ್ (29) ಅವರು ಜುಲೈ 24 ರಂದು ರಾತ್ರಿ 11:30 ಗಂಟೆಗೆ ತಾನು ವಾಸಿಸುವ ಬಾಡಿಗೆ ಮನೆಯ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಭದ್ರ ಪಡಿಸಿ ಸರಪಾಡಿಯಲ್ಲಿರುವ ತನ್ನದೇ ಸ್ವಂತ ಮನೆಗೆ ಹೋಗಿದ್ದರು. ಮರುದಿನ ಸಂಜೆ ಸುಮಾರು 7 ಗಂಟೆಗೆ ವಾಪಾಸು ಬಾಡಿಗೆ ಮನೆಗೆ ಬಂದಾಗ, ಮನೆಯ ಬಾಗಿಲಿಗೆ ಹಾಕಿದ ಬೀಗ ಇರಲಿಲ್ಲ, ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಮನೆಯ ಹಾಲ್ ನಲ್ಲಿ ನಾಲ್ಕು ಖಾಲಿ ಬಿಯರ್ ಬಾಟಲ್ ಇದ್ದು , ಮಲಗುವ ಕೋಣೆಗೆ ಹೋಗಿ ನೋಡಿದಾಗ ಮಲಗುವ ಕೊಠಡಿಯಲ್ಲಿದ್ದ ಗೊಡ್ರೇಜ್ ಕಪಾಟಿನ ಬಾಗಿಲು ತೆರೆದಿತ್ತು. ಗೊಡ್ರೇಜ್ ಕಪಾಟಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ನೆಲದಲ್ಲಿ ಬಿದ್ದಿತ್ತು. ಕಪಾಟಿನ ಒಳಗಡೆ ಇರುವ ಬೀಗ ಮುರಿದಿದ್ದು ಅದರಲ್ಲಿದ್ದ 18,500/- ರೂಪಾಯಿ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.