



ಡೈಲಿ ವಾರ್ತೆ: 20/ಅ./2025

ಕೋಟ ಜನತಾ ಸಂಸ್ಥೆಯಲ್ಲಿ ದೀಪಾವಳಿ ಸಡಗರ

ಕೋಟ: ಜನತಾ ಫಿಶ್ ಮೀಲ್ ಕೋಟ- ಪಡುಕರೆಯಲ್ಲಿ ದೀಪಾವಳಿಯ ಪ್ರಯುಕ್ತ “ಹಬ್ಬ” ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಸಂಸ್ಥೆಯ ಮುಖ್ಯಸ್ಥರಾದಂತಹ ಆನಂದ ಸಿ.ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನತಾ ಸಂಸ್ಥೆ ಒಂದು ಕುಟುಂಬವಿದ್ದಂತೆ ಹೀಗಾಗಿ ಹಬ್ಬಹರಿದಿನಗಳಂದು ನಾವೆಲ್ಲ ಒಟ್ಟಾಗಿ ಬೆರೆತು ಸಂಭ್ರಮಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಲ್ಲರಿಗೂ ಶುಭ ಕೋರಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಎ ಕುಂದರ್ , ರಕ್ಷಿತ್ ಎ. ಕುಂದರ್ ಮುಖ್ಯ ಅತಿಥಿಗಳಾಗಿ ಉದ್ಯಮಿ ಅಣ್ಣಪ್ಪ ಶ್ರೀಯಾನ್ ಮತ್ತು ಆನಂದ ಪಿ.ಸುವರ್ಣ ಜನತಾ ಸದಸ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಚಾರ್ವಿ ಕುಂದರ್ ,ಧನ್ಯತಾ ಕುಂದರ್ ಮತ್ತು ಅಕ್ಷರ ಕುಂದರ್ ಇವರಿಂದ ಯಕ್ಷಗಾನ ಕಾರ್ಯಕ್ರಮ ಮತ್ತು ಸಂಸ್ಥೆಯ ಸಿಬಂದಿಗಳಿಂದ ಬಲಿಂದ್ರ ಪೂಜೆ , ನೃತ್ಯ , ಕುಣಿತ ಭಜನೆ, ಸಾಮಾಜಿಕ ನಾಟಕ ಮತ್ತು ನರಕಾಸುರ ವಧೆ ಎಂಬ ಪೌರಾಣಿಕ ನಾಟಕ ನಡೆಯಿತು.