

ಡೈಲಿ ವಾರ್ತೆ: ಫೆ./16/2026
ಕುಂದಾಪುರದಲ್ಲಿ ‘ಉಮೀದ್ ಫೌಂಡೇಶನ್’ ಉದ್ಘಾಟನೆ: 12ಕ್ಕೂ ಹೆಚ್ಚು ಹೊಲಿಗೆ ಯಂತ್ರಗಳ ಉಚಿತ ವಿತರಣೆ

ಕುಂದಾಪುರ: ಸಾಮಾಜಿಕ ಸೇವಾ ಕಾರ್ಯಗಳಿಗೆ ಸಮರ್ಪಿತವಾದ ಉಮೀದ್ ಫೌಂಡೇಶನ್ ಕುಂದಾಪುರ (ರಿ.) ಇದರ ಉದ್ಘಾಟನಾ ಸಮಾರಂಭವು ಫೆಬ್ರವರಿ 15, 2026ರಂದು ಕುಂದಾಪುರದ ಜಾಮಿಯಾ ಮಸ್ಜಿದ್ ಹಾಲ್ನಲ್ಲಿ ಗಂಭೀರ ಹಾಗೂ ಅರ್ಥಪೂರ್ಣ ವಾತಾವರಣದಲ್ಲಿ ನಡೆಯಿತು.

ಕಾರ್ಯಕ್ರಮವು ಮೌಲಾನಾ ಶಾಹಿದ್ ಹುಸೇನ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಜನಾಬ್ ಇಬ್ರಾಹಿಂ ಕೋಟ ಅವರು ಸಂಸ್ಥೆಯ ಲೋಗೋವನ್ನು ಅನಾವರಣಗೊಳಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿ, ಸಂಸ್ಥೆಯ ಭವಿಷ್ಯದ ಸೇವಾ ಚಟುವಟಿಕೆಗಳಿಗೆ ಶುಭಾಶಯ ಕೋರಿದರು.

ಉಮೀದ್ ಫೌಂಡೇಶನ್ನ ಅಧ್ಯಕ್ಷರಾದ ಇಕ್ಬಾಲ್ ಪಿ. ಮೊಹಮ್ಮದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಉದ್ದೇಶಗಳು, ಭವಿಷ್ಯದ ಯೋಜನೆಗಳು ಹಾಗೂ ಸಮಾಜದ ಹಿಂದುಳಿದ ವರ್ಗಗಳಿಗೆ ನೆರವು ನೀಡುವ ಬದ್ಧತೆಯನ್ನು ವಿವರಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜನಾಬ್ ಅಬ್ದುಲ್ಲ ಬೆದ್ರೆ, ಜನಾಬ್ ಹಾರೂನ್ ಸಾಹೇಬ್, ಜನಾಬ್ ವಸಿಂ ಭಾಷಾ, ಜನಾಬ್ ಅಬುಮೊಹಮ್ಮದ್ ಮುಂಜಾವರ್ ಹಾಗೂ ಜನಾಬ್ ಸಯ್ಯದ್ ನಾಸಿರ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜನಾಬ್ ಮೊಹಮ್ಮದ್ ನಾಸಿರ್ ಅವರು ಹೊಲಿಗೆ ಯಂತ್ರಗಳ ವಿತರಣೆಯ ಕುರಿತು ವಿವರ ನೀಡಿದರು. ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ 12ಕ್ಕೂ ಹೆಚ್ಚು ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಯೋಜನೆಯು ಸ್ವಾವಲಂಬನೆಗೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ ಗುರುತಿಸಲ್ಪಟ್ಟಿತು.
ಸದಸ್ಯರಾದ ಮಹಮ್ಮದ್ ಸಮೀರ್ ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಹುಸೇನ್ ಹೈಕಾಡಿ ಅವರು ನಿರೂಪಿಸಿದರು.