ಡೈಲಿ ವಾರ್ತೆ: ಮಾ./09/2026

ಹುಸೇನ್ ಹೈಕಾಡಿಯವರಿಗೆ ‘ಔಟ್ ಸ್ಟಾಂಡಿಂಗ್ ನ್ಯಾಷನಲ್ ಡೈರೆಕ್ಟರ್’ ಪ್ರಶಸ್ತಿ ಪ್ರದಾನ

​ಬೆಂಗಳೂರು: ಇಲ್ಲಿನ ಬಂಟರ ಸಭಾ ಭವನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (SCI) ಬೆಂಗಳೂರು ಲೀಜನ್ ಆತಿಥ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ, ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕರಾದ ಹುಸೇನ್ ಹೈಕಾಡಿ ಅವರಿಗೆ ‘ಔಟ್ ಸ್ಟಾಂಡಿಂಗ್ ನ್ಯಾಷನಲ್ ಡೈರೆಕ್ಟರ್ ವಿನ್ನರ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

​ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ SNR, PPS, MR ಜಯೇಶಾ ಅವರು ಹುಸೇನ್ ಹೈಕಾಡಿ ಅವರ ನಾಯಕತ್ವ ಮತ್ತು ಸಂಘಟನಾತ್ಮಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಈ ಸಮಾರಂಭದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ವಾಸುದೇವನ್ (ಕೇರಳ), ರಾಷ್ಟ್ರೀಯ ಖಜಾಂಚಿ ಸಂಪತ್ ಕುಮಾರ್ (ದುಬೈ), ಜಿ ಎಲ್ ಸಿ ಜಗದೀಶ್, ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಸಿದ್ದಗಂಗೈಯಾ, ಬೋಬಾನ್, ಸುರೇಖಾ ಮುರಳೀಧರ (ಶಿವಮೊಗ್ಗ) ಮತ್ತು ಗೀತಾಲತಾ (ಮೈಸೂರು) ಉಪಸ್ಥಿತರಿದ್ದರು.

​ಕಾರ್ಯಕ್ರಮದಲ್ಲಿ ಪ್ರಮುಖ ನಿರ್ದೇಶಕರುಗಳಾದ ಶಿವಕುಮಾರ್, ಪ್ರದೀಪ್, ಪುಷ್ಪ ಶೆಟ್ಟಿ (ಶಿವಮೊಗ್ಗ) ಸೇರಿದಂತೆ ಸಂಸ್ಥೆಯ ಹಲವಾರು ಪ್ರಮುಖ ಪದಾಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

​ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್‌ನ ಈ ಸಮ್ಮೇಳನವು ದೇಶದ ವಿವಿಧ ಭಾಗಗಳ ನಾಯಕರನ್ನು ಒಗ್ಗೂಡಿಸಿ, ಸಂಸ್ಥೆಯ ಭವಿಷ್ಯದ ಕಾರ್ಯಚಟುವಟಿಕೆಗಳ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಿತು.