ಡೈಲಿ ವಾರ್ತೆ: 26 ಜನವರಿ 2023

ಮುಹಿಯುದ್ದಿನ್ ಜಾಮಿಯಾ ಮಸೀದಿ ಗಂಗಾವಳಿ. ಇದರ ವಾರ್ಷಿಕೋತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನ

ಗಂಗಾವಳಿ: ಮುಹಿಯುದ್ದಿನ್ ಜಾಮಿಯಾ ಮಸೀದಿ ಗಂಗಾವಳಿ. ಇದರ ವಾರ್ಷಿಕೋತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನ ಗಂಗಾವಳಿಯ ಸಾರ್ವಜನಿಕ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಿಯುದ್ದೀನ್ ಜಾಮೀಯ ಮಸಿದಿ ಅಧ್ಯಕ್ಷರಾದ ಕೆ ಅಲಿ ಎಮ್ ಮೊಲವಿ ವಹಿಸಿದರು.

ಗಣ್ಯ ಅತೀಥಿಗಳಿಗೆ ನಿವೃತ್ತ ಶಿಕ್ಷಕರು ಹಾಗು mjm ಗಂಗಾವಳಿ ಇದರ ಮಾಜಿ ಅಧ್ಯಕ್ಷರಾದ ಅಬ್ದುಲ್ಲಾ ಎಮ್ ಮೊಲವಿ ಸ್ವಾಗತ ಕೊರಿದರು. ವೇದಿಕೆಯಲ್ಲಿ ಮುಖ್ಯ ಅತೀಥಿ ಗಲಾಗಿ ಪರಮ ಪೂಜ್ಯ ಮ.ನಿ.ಪ್ರ. ಢಾ|| ಮಹಾಂತ ಮಹಾ ಸ್ವಾಮಿಗಳು.( ಸಂಸ್ಥಾನ ಮಠ. ಸೊರಬ )
ಮಾನ್ಯ ಶ್ರೀ ಫಾದರ್ ಆರ್ ಜ್ಞಾನ ಪ್ರಕಾಶ್ ರಾವ್ ( ಸೈನ್ ಟ್ಟ್ ಜಾನ್ ಇವೆಂಗಲಿಸ್ಟ್ ಚರ್ಚ್ ಚೆಂಡಿಯ ಕಾರವಾರ )
ಬಹುಮಾನ್ಯ ಪಿ.ಪಿ. ಅಹ್ಮದ್ ಸಖಾಫಿ. ಕಾಶಿಪಾಟ್ನಾ ಮಂಗಳೂರು.ಕಾರ್ಯಕ್ರಮ ದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಊರಿನಎಲ್ಲಾ ಧರ್ಮದವರು ಜಾತಿ ಮತ ಭೇದ ಮರೆತು ಭಾಗವಹಿಸಿದರು.
ಹುಸೈನ್ ಬಿಜಾಪುರ ಗಂಗಾವಳಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.