ಡೈಲಿ ವಾರ್ತೆ:10 ಫೆಬ್ರವರಿ 2023

ಫೆ.12ರಂದು ಬೀಜಾಡಿಯಲ್ಲಿ ಕರಾವಳಿ ಉತ್ಸವ

ಕೋಟೇಶ್ವರ: ಕರಾವಳಿ ಫ್ರೆಂಡ್ಸ್ ಬೀಜಾಡಿ ಇವರ ನೇತೃತ್ವದಲ್ಲಿ ಕರಾವಳಿ ಉತ್ಸವ ಕಾರ್ಯಕ್ರಮವು ಫೆ.12ರಂದು ಬೀಜಾಡಿಯ ಕರಾವಳಿ ಬೀಚ್ ಪರಿಸರದಲ್ಲಿ ಜರುಗಲಿದೆ. ಸಂಜೆ 3 ಗಂಟೆಯಿಂದ ಗಾಳಿಪಟ ಉತ್ಸವ, ಹಗ್ಗ ಜಗ್ಗಾಟ ಸ್ಪಧೆ೯, ನೃತ್ಯ ಗಾನ ವೈಭವ, ಓಂಕಾರ್ ಕಲಾವಿದರಿಂದ ಕುಂದಗನ್ನಡ ಹಾಸ್ಯಮಯ ನಗೆ ನಾಟಕ ಅಗೋಚರ ತೆರೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದ.ಕ ಜಿಲ್ಲಾ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ಕಿಂಡರ್ ಗಾಡ೯ನ್ ಉದ್ಘಾಟನೆಗೊಳ್ಳಲಿದ್ದು, ಸಮಾಜ ಸೇವಕ ಈಶ್ವರ್ ಮಲ್ಪೆ ಇವರಿಗೆ ಕರಾವಳಿ ರತ್ನ ಬಿರುದು ಪ್ರದಾನ ಮಾಡಲಾಗುತ್ತದೆ. ಡ್ರಾಮಾ ಜ್ಯೂನಿಯರ್ ಸಿಸಿನ್ 4ರ ವಿನ್ನರ್ ಸಮೃದ್ಧಿ ಮೊಗವೀರ, ಚಿನ್ನದ ಪದಕ ವಿಜೇತ ವಿದ್ಯಾಥಿ೯ ಆದರ್ಶ ಇವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.