ಡೈಲಿ ವಾರ್ತೆ:12 ಫೆಬ್ರವರಿ 2023

ಸಿಂದಗಿ:ಸಹ ಶಿಕ್ಷಕ ನೇಣು ಬಿಗಿದು ಆತ್ಮಹತ್ಯೆ!

ಸಿಂದಗಿ: ತಾಲೂಕು ಮಿನಿವಿಧಾನ ಸೌಧದ ಆವರಣ ಹಿಂಭಾಗದಲ್ಲಿ ಬಸವರಾಜ ಎಂ ನಾಯ್ಕಲ್ (51) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂದಗಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತ ಬಸವರಾಜ ಅವರು ಮೂಲತಃ ಕೋರವಾರ ಗ್ರಾಮದವರು ಎಂದು ತಿಳಿದಿದೆ. ಇವರು ಸಾಸಾಬಾಳ ಸರಕಾರಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸದರಿ ಸಿಂದಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.