ಡೈಲಿ ವಾರ್ತೆ:13 ಫೆಬ್ರವರಿ 2023

ಸಾವಿರ ಹಸುಗಳ ದತ್ತು ಸ್ವೀಕಾರ ಸಂಕಲ್ಪ: ಸುಪ್ರಸಾದ್ ಶೆಟ್ಟಿ

ಬ್ರಹ್ಮಾವರ ಉಡುಪಿ ಜಿಲ್ಲೆಯ ವಿವಿಧ ಗೋಶಾಲೆಗಳ ಸುಮಾರು ಒಂದು ಸಾವಿರ ಗೋವುಗಳನ್ನು ದತ್ತು ಸ್ವೀಕಾರ ನಡೆಸಲು ಉದ್ದೇಶಿಸಿರುವ ವಂದೇ ಗೋ‌ಮಾತರಂ ಕಾರ್ಯಕ್ರಮದ ಸಭೆ ಬಹ್ಮಾವರದ ಬಂಟರ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಗೋಶಾಲೆಗಳಲ್ಲಿ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಈ ಎಲ್ಲಾ ಗೋಶಾಲೆಗಳಲ್ಲಿರುವ ಒಂದು ಸಾವಿರ ಹಸುಗಳನ್ನು ವಿವಿಧ ಸಂಘಸಂಸ್ಥೆಗಳು ಸಹಿತ ಗೋಪ್ರೇಮಿಗಳು ದತ್ತು ಸ್ವೀಕಾರ ಮಾಡುವ ರೂಪುರೇಷೆಗಳ ಕುರಿತಾಗಿ ಚರ್ಚೆ ನಡೆಯಿತು.

ವಂದೇ ಗೋಮಾತರಂ ಸಾವಿರ ಗೋವುಗಳ ದತ್ತು ಸ್ವೀಕಾರ ಸಂಕಲ್ಪದ ರುವಾರಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ ಶೆಟ್ಟಿ ಅವರು ಮಾತನಾಡಿ, ಜಿಲ್ಲೆಯ ವಿವಿಧ ಗೋಶಾಲೆಗಳಲ್ಲಿ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು ನಿರ್ವಹಣೆ ಕಷ್ಟಕರವಾಗುತ್ತಿದೆ. ಪ್ರತಿ ದಿನ ವಿವಿಧ ಭಾಗಗಳಲ್ಲಿ ರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಗಳಿಗೆ ಬಿಡಲಾಗುತ್ತಿದೆ. ಹೀಗಾಗಿ ಗೋವುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಸಹಕಾರದ ಅಗತ್ಯವಿದೆ. ಹೀಗಾಗಿ ಸಾವಿರ ಗೋವುಗಳನ್ನು ದತ್ತು ಸ್ವೀಕಾರ ಮಾಡುವ ಮೂಲಕ ಗೋವಿನ ಸೇವೆಗೆ, ಗೋಶಾಲೆಗಳ ನಿರ್ವಹಣೆಗೆ ಪ್ರೋತ್ಸಾಹ ನೀಡಬೇಕು ಎಂದರು. ಹಾಗೂ ಪುಣ್ಯ ಸಂಚಯನ ದ ಈ ಕಾರ್ಯದಲ್ಲಿ ಉಡುಪಿ ಜಿಲ್ಲೆಯ ಗೋ ಪ್ರೇಮಿಗಳು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು ಸಭೆಯಲ್ಲಿ ನಂಚಾರು ಕಾಮಧೇನು ಗೋಶಾಲೆಯ ಟ್ರಸ್ಟಿ ರಾಜೀವ ಚಕ್ಕೇರ, , ಅನಿವಾಸಿ ಭಾರತೀಯ ಉದ್ಯಮಿ ಬಿ.ಕೆ ಶೆಟ್ಟಿ, ಉದ್ಯಮಿ ರಮೇಶ್ ದೇವಾಡಿಗ,,ನಿವೃತ್ತ ಜೀವ ವಿಮಾ ಇಲಾಖೆ ಅಧಿಕಾರಿ ಭಾಸ್ಕರ್ ಶೆಟ್ಟಿ, ಮತ್ಸ್ಯೋಧ್ಯಮಿ ಶಂಭು ಟಿ ಸಾಲ್ಯಾನ, ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಗೋಳಿಕಟ್ಟೆ, ಮತ್ಸೊದ್ಯಮಿ ತಾರಾನಾಥ್ ಮಲ್ಪೆ, ಯುವ ಉದ್ಯಮಿ ಪ್ರವೀಣ್ ಕೊಟ್ಟಂ, ಸಮರ್ಥ ಭಾರತದ ಅರುಣ್ ಭಂಡಾರಿ, ಪ್ರಸಾದ್ ಕುಮಾರ್ , ಗಾಣಿಗ ಸಮಾಜದ ಪ್ರಮುಖರಾದ ಜಯರಾಮ್ ಜಿ, ರಾಮಕೃಷ್ಣ ಹಾರಾಡಿ, ಉದ್ಯಮಿಗಳಾದ ಜಗನಾಥ್ ಪೂಜಾರಿ,ಪ್ರಶಾಂತ್ ಕುರಾಡಿ, ವಿಶ್ವನಾಥ್ ಶೆಟ್ಟಿ, ಶಿಕ್ಷಕ ಸುರೇಂದ್ರ ಶೆಟ್ಟಿ,, ರಾಮಕೃಷ್ಣ ಶೆಟ್ಟಿಗಾರ, ಶಾರದೋತ್ಸವ ಸಮಿತಿಯ ಭಾರತಿ ಶೆಟ್ಟಿ, ಮೋಹನ್ ಕುಂಬ್ರುಗೋಡು, ಪುನೀತ್ ಕುಮಾರ್, ಸಂತೋಷ್ ತೆಕಟ್ಟಿ, ವೆಂಕಟೇಶ್ ಶೆಟ್ಟಿ, ಕೃಷಿಕರಾದ ಅಶೋಕ್ ಶೆಟ್ಟಿ ಇಂಜಿನಿಯರ್ ಗೌರವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
ನಿವೃತ್ತ ಶಿಕ್ಷಕ ಬೈಕಾಡಿ ದಿನಕರ ಶೆಟ್ಟಿ ನಿರೂಪಿಸಿದರು. ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ವಂದಿಸಿದರು