ಡೈಲಿ ವಾರ್ತೆ:23 ಫೆಬ್ರವರಿ 2023

ಧಾರವಾಡ: ರಾ.ಹೆ. 4ರಲ್ಲಿ ಭೀಕರ ಅಪಘಾತ, ಬೆಳಗಾವಿ ಮೂಲದ ಐವರ ಸಾವು.!

ಧಾರವಾಡ : ಧಾರವಾಡ ತಾಲೂಕಿನ ತೇಗೂರ ಸಮೀಪ ಲಾರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಐವರು ಸಾವಿಗೀಡಾದ ಘಟನೆ ನಡೆದಿದೆ.

ಮೃತಪಟ್ಟವರು ಕಿತ್ತೂರಿನ ಔರಾದಿ ಗ್ರಾಮದ ಮಹಾಂತೇಶ, ಬಸವರಾಜ, ನಾಗಪ್ಪ ಹಾಗೂ‌ ಶ್ರೀಕುಮಾರ ಎಂದು ತಿಳಿದುಬಂದಿದೆ. ಇನ್ನೂ ಧಾರವಾಡದ ಹೆಬ್ಬಳ್ಳಿ ಗ್ರಾಮದ ಪಾದಚಾರಿ ಈರಣ್ಣ ರಾಮಗೌಡರ ಎಂಬುವವರು ಸಹ ಮೃತಪಟ್ಟಿದ್ದಾರೆ.

ಲಾರಿಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಹಾಗೂ ಓರ್ವ ಪಾದಚಾರಿ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಳಗಾವಿಯಿಂದ ಧಾರವಾಡದ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.