ಡೈಲಿ ವಾರ್ತೆ:01 ಮಾರ್ಚ್ 2023

ಮಾರ್ಚ್ 2 ರಂದು ಜನ್ಸಾಲೆಯಲ್ಲಿ ನವೀಕೃತಗೊಂಡ ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆ

ಕುಂದಾಪುರ: ಸಿದ್ದಾಪುರ ಜನ್ಸಾಲೆಯಲ್ಲಿ ನವೀಕೃತಗೊಂಡ
ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ ಮತ್ತು ಬೃಹತ್ ದಫ್ ಸ್ಪರ್ಧೆ ಕಾರ್ಯಕ್ರಮವು ಮಾರ್ಚ್ 2 ರಂದು ಗುರುವಾರ ಬೆಳಿಗ್ಗೆ 10:30 ನಡೆಯಲಿದೆ.

ಈ ಮಸೀದಿ ಉದ್ಘಾಟನೆ ನೇತೃತ್ವ ಕುಂಬೋಳ್ ಅಸ್ಸಯ್ಯಿದ್ ಕೆ. ಎಸ್. ಆಟಕೋಯ ತಂಙಳ್‌ ಉದ್ಘಾಟಿಸಲಿದ್ದಾರೆ.
ಸಭಾಧ್ಯಕ್ಷತೆ ಬಿ. ಜೆ. ಎಂ. ಇದರ ಅಧ್ಯಕ್ಷರಾದ ಅಬ್ದುಲ್ ಮುನೀರ್ ವಹಿಸಲಿದ್ದು.
ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸ್ ತಂಙಳ್‌ ಕಿಲ್ಲೂರು ಇವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ನೌಫಲ್ ಸಖಾಫಿ ಕಳಸ, ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನದ ಆಡಳಿತ ಮುಕ್ತೇಶ್ವರ ಸಚ್ಚಿದಾನಂದ ಚಾತ್ರ, ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ಸ್ವಾಮಿ ಸುನಿಲ್ ವೇಗಸ್ ಇವರು ಸೌಹಾರ್ದ ಭಾಷಣ ಮಾಡಲಿದ್ದಾರೆ.
ಅಲ್ಲದೆ ಹಲವಾರು ಉಲಮಾ, ಉಮರಾ, ರಾಜಕೀಯ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಅನ್ನದಾನ ವಿತರಣೆ ನಡೆಯಲಿದ್ದು
ಮಗ್ರಿಬ್ ನಮಾಝಿನ ಬಳಿಕ ಅಂತರ್ ರಾಜ್ಯ ಮಟ್ಟದ ಬೃಹತ್ ದಫ್ ಸ್ಪರ್ಧೆ ನಡೆಲಿದೆ ಎಂದು ಬಿ.ಎಂ. ಜೆ. ಜನ್ಸಾಲೆ ಇದರ ಅಧ್ಯಕ್ಷ ಅಬ್ದುಲ್ ಮುನೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.