ಡೈಲಿ ವಾರ್ತೆ:30 ಮಾರ್ಚ್ 2023

ಉಡುಪಿ:ಅಕ್ರಮವಾಗಿ ಮನೆಗೆ ನುಗ್ಗಿದ ನಾಲ್ವರ ತಂಡ ಯುವಕನಿಗೆ ಲೇಸರ್ ಬ್ಲೇಡ್ ಯಿಂದ ಹಲ್ಲೆ, ಕೊಲೆಗೆ ಯತ್ನ – ಇಬ್ಬರ ಬಂಧನ

ಉಡುಪಿ: ಆದಿ ಉಡುಪಿಯ ಎಪಿಎಂಸಿ ಮಾರ್ಕೇಟ್‌ನ ಹಿಂಬದಿಯಲ್ಲಿ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿದ ನಾಲ್ವರ ತಂಡ ಯುವಕನಿಗೆ ಲೇಸರ್ ಬ್ಲೇಡ್ ನಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.

ಸ್ಥಳೀಯ ನಿವಾಸಿ ಪ್ರಶಾಂತ (27) ಹಲ್ಲೆಗೊಳಗಾದವರು, ಪ್ರಕರಣಕ್ಕೆ ಸಂಬಂಧಿಸಿ ಪ್ರಶಾಂತ, ಸಂತೋಷ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ ಅವರು ಇಂದು ಬೆಳಗ್ಗಿನ ಜಾವ ಆದಿಉಡುಪಿಯ ಎಪಿಎಂಸಿ ಮಾರ್ಕೇಟ್‌ನ ಹಿಂಬದಿಯಲ್ಲಿರುವ ನಮ್ಮ ಮನೆಯಲ್ಲಿರುವಾಗ ಆರೋಪಿಗಳಾದ ಪ್ರಶಾಂತ, ಸಂತೋಷ ಹಾಗೂ ಅಪ್ರಾಪ್ತ ಬಾಲಕರಿಬ್ಬರು ಸೇರಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಪ್ರಶಾಂತ ಅವರಿಗೆ ನೀನು ಬಾರಿ ಮಾತನಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೆ ಆರೋಪಿತರಲ್ಲಿ ಓರ್ವನು ಪ್ರಶಾಂತ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಬೇಡ್ ನಿಂದ ಇವರ ಎದೆ ಹಾಗೂ ಹೊಟ್ಟೆಗೆ ಗೀರಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಪ್ರಶಾಂತ ರವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಅವರು ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಆರೋಪಿಗಳು ಮನೆಯ ಕಿಟಕಿ ಗಾಜುಗಳನ್ನು ಪುಡಿ ಪಾಡಿದ್ದು ದ್ವಿಚಕ್ರ ವಾಹನಕ್ಕೂ ಹಾನಿ
ಮಾಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.