ಡೈಲಿ ವಾರ್ತೆ:28 ಏಪ್ರಿಲ್ 2023

ಸಾಲಿಗ್ರಾಮದಲ್ಲಿ ಸಂಭ್ರಮದ ಶ್ರೀ ಶಂಕರ ಜಯಂತಿ ಆಚರಣೆ

ಸಾಲಿಗ್ರಾಮ : ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಹಾಗೂ ಬ್ರಾಹ್ಮಣ ಮಹಾ ಸಭಾ ಸಾಲಿಗ್ರಾಮ ವಲಯ ಇವರ ವತಿಯಿಂದ ಶ್ರೀ ಶಂಕರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ
ಡಾ. ಕೆ. ಎಸ್.ಕಾರಂತರು ಸಮಾರಂಭವನ್ನು ದೀಪ ಬೆಳಗಿ ಉದ್ಘಾಟಿಸಿ,
ಶ್ರೀ ಶಂಕರಾಚಾರ್ಯರ ಸಂದೇಶಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮನುಷ್ಯ ಜೀವನದ ಸಾಥ೯ಕ್ಯವನ್ನು ಪಡೆಯುವಂತಾಗಬೇಕು ಎಂದು ನುಡಿದರು.

ಅತಿಥಿ ಉಪನ್ಯಾಸ ನೀಡಿದ ವೇದಮೂತಿ೯ ಶ್ರೀ ವೆಂಕಟರಮಣ ನಾವುಡರು ಶ್ರೀ ಶಂಕರಾಚಾರ್ಯರ ಬಾಲ್ಯ ಜೀವನ ,ಅವರ ವ್ಯಕ್ತಿತ್ವ, ಸಾಧನೆಗಳ ವಿಶಿಷ್ಠತೆಯನ್ನು ವಿವರವಾಗಿ ತಿಳಿಸಿದರು.
ಉಡುಪಿ ಜಿಲ್ಲಾ ಶಾಂಕರತತ್ವ ಪ್ರಚಾರ ಸಮಿತಿಯ ಸಹ ಸಂಚಾಲಕರಾದ ಶ್ರೀಮತಿ ಸವಿತಾ ಎಮಾ೯ಳ್ ರವರು ಶ್ರೀ ಶಂಕರ ಜಯಂತಿ ಆಚರಣೆಯ ಮಹತ್ವದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಬ್ರಾಹ್ಮಣ ಮಹಾ ಸಭಾ ಸಾಲಿಗ್ರಾಮ ವಲಯದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಭಾದ ಉಪಾಧ್ಯಕ್ಷ
ಶ್ರೀ ಜಿ. ಪಟ್ಟಾಭಿರಾಮ ಸೋಮಯಾಜಿ ಸ್ವಾಗತಿಸಿದರು. ಸಭಾದ ಕಾಯ೯ದಶಿ೯ ಶ್ರೀ ಕೆ.ರಾಜಾರಾಮ ಐತಾಳ ಕಾಯ೯ಕ್ರಮವನ್ನು ನಿರೂಪಿಸಿ, ವಂದಿಸಿದರು.

ಶ್ರೀ ಗುರುನರಸಿಂಹ ನಿಗಮಾಗಮ ವೇದ ಪಾಠ ಶಾಲೆಯ ವೇದ ಶಿಬಿರಾಥಿ೯ಗಳು, ಸಭಾದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.