ಡೈಲಿ ವಾರ್ತೆ:07 ಮೇ 2023

ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಸಾಲಿಗ್ರಾಮದವರೆಗೆ ಬೃಹತ್ ಕಾಂಗ್ರೆಸ್ ಕಾಲ್ನಡಿಗೆ ಜಾಥ

ಕೋಟ: ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲ್ಲೆಯಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಮ್ಮ ಪಕ್ಷದ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ ನೇತ್ರತ್ವದಲ್ಲಿ ಬೃಹತ್ ಕಾಲ್ನಡಿಗೆ ಜಾಥ ಶನಿವಾರ ಜರಗಿತು.

ಸಾಲಿಗ್ರಾಮದ ಗುಂಡ್ಮಿ ಕೋಟ ಬ್ಲಾಕ್ ಕಛೇರಿಯಿಂದ ಹೊರಟ ಕಾಲ್ನಡಿಗೆ ಜಾಥದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದರು.

ಸಾಲಿಗ್ರಾಮ ಮುಖ್ಯಪೇಟೆಯ ಮೂಲಕ ಸಂಚರಿಸಿ ಬಸ್ ತಂಗುದಾಣದಲ್ಲಿ ಕಾಲ್ನಡಿಗೆ ಜಾಥ ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ವಿಕಾಸ್ ಹೆಗ್ಡೆ ಹಾಗೂ ಕೊಳ್ಕೆಬೈಲ್ ಮಾತನಾಡಿ ಬಿಜೆಪಿ ನಕಲಿ ಹಿಂದುತ್ವದ ಹೆಸರಿನಲ್ಲಿ ಮತಯಾಚಿಸುತ್ತಿದೆ. ರಾಮ, ಹನುಮರ ಹೆಸರಿನಲ್ಲಿ ಮತ ಯಾಚಿಸುವ ಹೀನ ಮನಸ್ಥಿತಿಯನ್ನು ತೋರ್ಪಡಿಸುತ್ತದೆ. ಕಾಂಗ್ರೆಸ್ ಪಕ್ಷದ ಜನಸ್ನೇಹಿ ಪ್ರಣಾಳಿಕೆ ನೋಡಿ ಬಿಜೆಪಿ ದಿಕ್ಕು ತಪ್ಪಿದಂತೆ ವರ್ತಿಸುತ್ತಿದೆ ಇದಕ್ಕೆ ಬೇರೆ ದಾರಿ ಇಲ್ಲದೆ ಭಜರಂಗಿ ವಿಚಾರವನ್ನು ಮುಂದುಟ್ಟುಕೊಂಡು ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿದೆ. ಬಿಜೆಪಿ ಭ್ರಷ್ಟಾಚಾರದಲ್ಲೆ ಮುಳುಗಿ ಆಡಳಿತ ನಡೆಸಿದೆ. ಈ ಬಾರಿ ಬದಲಾವಣೆ ಜನ ಬಯಸಿದ್ದಾರೆ. ಅದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಗುದ್ದುಗೆ ಏರಲಿದೆ ಕುಂದಾಪುರದಲ್ಲಿ ಹೊಸ ಭರವಸೆ ದಿನೇಶ್ ಹೆಗ್ಡೆ ಮೂಲಕ ಜನಸಾಮಾನ್ಯರಿಗೆ ದಕ್ಕಲಿದೆ ಎಂದು ಕಾಂಗ್ರೆಸ್ ಪರವಾಗಿ ಮತಯಾಚಿಸಿದರು.
ಈ ವೇಳೆ ಕಾಂಗ್ರೆಸ್ ಮೀನುಗಾರ ಪ್ರಕೋಷ್ಠ ರಾಜ್ಯಾಧ್ಯಕ್ಷ ಮಂಜುನಾಥ ಸೊಣಗಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ, ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್, ಸಾಲಿಗ್ರಾಮ ಪ.ಪಂ ವಿಪಕ್ಷ ನಾಯಕ ಶ್ರೀನಿವಾಸ್ ಅಮೀನ್, ಗಣೇಶ್ ನೆಲ್ಲಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ ನೇತ್ರತ್ವದಲ್ಲಿ ಸಾಲಿಗ್ರಾಮ ಮುಖ್ಯಪೇಟೆಯ ಮೂಲಕ ಸಂಚರಿಸಿ ಬಸ್ ತಂಗುದಾಣದಲ್ಲಿ ಕಾಲ್ನಡಿಗೆ ಜಾಥ ಸಮಾಪನಗೊಂಡಿತು.