ಡೈಲಿ ವಾರ್ತೆ:20 ಮೇ 2023



ಕೆ .ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ,

  • ಸಿದ್ದರಾಮಯ್ಯನಾದ ನಾನು….! ನಿಷ್ಪಕ್ಷಪಾತ ಅಧಿಕಾರ ನಡೆಸಲು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ…!” ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ….!” ಅಧಿಕಾರಕ್ಕೆ ಬಂತು ಕಾಂಗ್ರೆಸ್ ಸರ್ಕಾರ …!” ಉಚಿತ ಭಾಗ್ಯಗಳಿಗೆ ರಾಜ್ಯದ ಜನ ಕಾತರ…!”

ಸುದ್ದಿ:ಬೆಂಗಳೂರು:ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಯಾಗಿ ಶ್ರೀಯುತ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಇಂದು ಪ್ರಮಾಣವಚನ ಬೆಂಗಳೂರಿನಲ್ಲಿ ಸ್ವೀಕರಿಸಿದರು. ಸರ್ಕಾರದ ನೂತನ ಸಾರಥಿಯಾಗಿ ಕಾರ್ಯನಿರ್ವಹಿಸಲು ಮುಖ್ಯಮಂತ್ರಿ ಮತ್ತು ಖಾತೆಯ ಸಚಿವರು ಹಾಗೂ ಉಪಮುಖ್ಯಮಂತ್ರಿ ಇಂದಿನಿಂದ ಅಧಿಕೃತವಾಗಿ ಸರ್ಕಾರದ ವಿವಿಧ ಕಾರ್ಯಗಳು ಚಾಲನೆ ನೀಡಲು ಮುಂದಾದರು. ಮೇ 13 ರಿಂದ ರಾಜಕೀಯ ಚಿತ್ರಣ ಬದಲಾಗುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಜಟಾಪಟಿ ನಡೆದಿದ್ದು ,ಇದರ ಬೆನ್ನಲ್ಲಿಯೇ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೇರಿಸಲು ತೀರ್ಮಾನ ಕೈಗೊಂಡರೆ ಇತ್ತ ಪಟ್ಟು ಬಿಡದ ಡಿಕೆಶಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಯಿತು. ಒಟ್ಟಾರೆಯಾಗಿ ಸರ್ಕಾರದ ಮಂತ್ರಿ ಗಿರಿಗೆ ಕೆಲವು ಶಾಸಕರು ಆಯ್ಕೆಯಾದರೂ ಇನ್ನೂ ಕೆಲವು ಶಾಸಕರು ದೂರ ಉಳಿದಿರುವುದು ನೋವು ತರಿಸಿದೆ. ಕರ್ನಾಟಕ ಸರ್ಕಾರದಲ್ಲಿ ವಿಶೇಷ ರೀತಿ ಯೋಜನೆಗಳನ್ನ ಜಾರಿಗೆ ತರಲು ಮತ್ತು ಮುಂದಿನ ಸಚಿವ ಸಂಪುಟದಲ್ಲಿ ವಿವಿಧ ತರನಾದಂತಹ ಭಾಗ್ಯಗಳನ್ನು ಘೋಷಣೆ ಮಾಡಲಿದ್ದಾರೆ ಮಾನ್ಯ ಮುಖ್ಯಮಂತ್ರಿಗಳು ಇಂದಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದವರು ಕರ್ನಾಟಕ ಸರ್ಕಾರವನ್ನ ಸಮುದ್ರವಾಗಿ ಐದು ವರ್ಷಗಳ ಕಾಲ ನಿರಂತರವಾಗಿ ಆಡಳಿತ ಮಾಡುತ್ತೇವೆ ಅದಲ್ಲದೆ ಜನರ ಆಶೋತ್ತರಗಳಿಗೆ ನಾವು ಬೆಂಬಲ ಹಾಗೂ ಜನರ ಸೇವೆ ಮಾಡಲು ಅನವರತ ಸಿದ್ಧರಿದ್ದೇವೆ ಎಂಬ ಮಾಹಿತಿಯನ್ನು ಕೂಡ ಜನರಿಗೆ ಇದೇ ಸಂದರ್ಭದಲ್ಲಿ ಹೇಳಿದರು ಪ್ರಮಾಣವಚನ ಸ್ವೀಕರಿಸಿದಂತಹ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತಾ ನಿಷ್ಕಲ್ಮಶ ಆಡಳಿತ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ಮಾಡಲು ನಾವು ಪಣತೊಟ್ಟಿದ್ದೇವೆ ಅದಲ್ಲದೆ ನುಡಿದಂತೆ ನಮ್ಮ ಸರಕಾರ ನಡೆಯುತ್ತಿದ್ದೇವೆ ಎಂದು ಆಶ್ವಾಸವನ್ನ ಹೇಳಿದರು ಇದೇ ಸಂದರ್ಭದಲ್ಲಿ ರಾಜ್ಯದ ಜನರಿಗೆ ಮತದಾರರಿಗೆ ಧನ್ಯವಾದಗಳು ಸಮರ್ಪಣೆ ಮಾಡುವುದರ ಮೂಲಕ ಪ್ರಮಾಣವಚನ ಸ್ವೀಕರಿಸಿದರು.

ಕರ್ನಾಟಕ ಸಚಿವ ಸಂಪುಟದ ಮೊದಲ ಕಂತಿನ ರಚನೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಖ್ಯ ಕಾರಣ ಎನ್ನಲಾದ ಸಮುದಾಯಗಳಿಗೆ ಗೌರವ ಸಲ್ಲಿಸಲಾಗಿದೆ. ಒಟ್ಟು 10 ಸದಸ್ಯರಲ್ಲಿ (ಸಿಎಂ, ಡಿಸಿಎಂ ಸೇರಿ) ಮೂವರು ಎಸ್‌ಸಿ, 1 ಎಸ್‌ಟಿ, 2 ಒಕ್ಕಲಿಗರು, 1 ಒಬಿಸಿ, 2 ಅಲ್ಪಸಂಖ್ಯಾತರು ಮತ್ತು ಒಬ್ಬರು ಲಿಂಗಾಯತರಾಗಿದ್ದಾರೆ.
ಕರ್ನಾಟಕ ಸಚಿವ ಸಂಪುಟದ ಮೊದಲ ಕಂತಿನ ರಚನೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಖ್ಯ ಕಾರಣ ಎನ್ನಲಾದ ಸಮುದಾಯಗಳಿಗೆ ಗೌರವ ಸಲ್ಲಿಸಲಾಗಿದೆ. ಒಟ್ಟು 10 ಸದಸ್ಯರಲ್ಲಿ (ಸಿಎಂ, ಡಿಸಿಎಂ ಸೇರಿ) ಮೂವರು ಎಸ್‌ಸಿ, 1 ಎಸ್‌ಟಿ, 2 ಒಕ್ಕಲಿಗರು, 1 ಒಬಿಸಿ, 2 ಅಲ್ಪಸಂಖ್ಯಾತರು ಮತ್ತು ಒಬ್ಬರು ಲಿಂಗಾಯತರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಬಿಸಿ (ಕುರುಬ) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಕ್ಕಲಿಗ, ಜೊತೆಗೆ ರಾಮಲಿಂಗಾ ರೆಡ್ಡಿ ಕೂಡ ಒಕ್ಕಲಿಗರಾಗಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಮೂವರು ಸಚಿವರಿದ್ದಾರೆ. ಅವರೆಂದರೆ, ಡಾ ಜಿ ಪರಮೇಶ್ವರ, ಕೆಎಚ್ ಮುನಿಯಪ್ಪ ಮತ್ತು ಪ್ರಿಯಾಂಕ್ ಖರ್ಗೆ. ಸಚಿವ ಸಂಪುಟದಲ್ಲಿ ಇಬ್ಬರು ಅಲ್ಪಸಂಖ್ಯಾತರು (ಕೆಜೆ ಜಾರ್ಜ್ ಮತ್ತು ಜಮೀರ್ ಅಹಮದ್ ಖಾನ್) ಸೇರಿದ್ದಾರೆ. ಎಸ್ಟಿ ಸಮುದಾಯದ ಸತೀಶ್ ಜಾರಕಿಹೊಳಿ ಮತ್ತು ಲಿಂಗಾಯತ ನಾಯಕ ಎಂಬಿ ಪಾಟೀಲ್ಗೆ ಅವಕಾಶ ನೀಡಲಾಗಿದೆ.
ಪ್ರಾದೇಶಿಕವಾರು ನೋಡಿದರೆ, ಬೆಂಗಳೂರಿನಿಂದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಬೆಂಗಳೂರು ಮತ್ತು ಹಳೇ ಮೈಸೂರಿಗೆ (ಸಿದ್ದರಾಮಯ್ಯ, ಶಿವಕುಮಾರ್ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್, ಕೆ.ಎಚ್. ಮುನಿಯಪ್ಪ ಮತ್ತು ಜಿ. ಪರಮೇಶ್ವರ್) ಸಿಂಹಪಾಲು ಪ್ರಾಸ್ತ್ಯ ದೊರೆತರೆ, ಉಳಿದಂತೆ ಉತ್ತರ ಕರ್ನಾಟಕದ ಮೂವರು (ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ.ಪಾಟೀಲ್) ಎಂ.ಬಿ. ಪಾಟೀಲ್ ಕಲ್ಯಾಣ ಕರ್ನಾಟಕದವರಾಗಿದ್ದಾರೆ. ಮಧ್ಯ ಕರ್ನಾಟಕ ಅಥವಾ ಕರಾವಳಿ ಕರ್ನಾಟಕದಿಂದ ಯಾವುದೇ ಪ್ರಾತಿನಿಧ್ಯವಿಲ್ಲ.
ಮೇಲ್ನೋಟಕ್ಕೆ, ಸಮುದಾಯಗಳ ಪ್ರಾತಿನಿಧ್ಯ ಹಾಗೂ ರಾಜ್ಯದ ವಿವಿಧ ಪ್ರದೇಶಗಳ ಪ್ರಾತಿನಿಧ್ಯದ ವಿಷಯದಲ್ಲಿ ಸಚಿವ ಸಂಪುಟದಲ್ಲಿ ಎಡವಟ್ಟು ಕಾಣುತ್ತಿದೆ. ಇದು ಕ್ಯಾಬಿನೆಟ್‌ನ ಮೊದಲ ಕಂತು, ಮತ್ತು ಪ್ರಾತಿನಿಧ್ಯದ ಅಸಮಾನತೆಯನ್ನು ಪರಿಹರಿಸಲು ಕನಿಷ್ಠ ಒಂದು ಅಥವಾ ಎರಡು ವಿಸ್ತರಣೆಗಳಾಗಬಹುದು. ಕಾನೂನಿನಿಂದ ಅನುಮತಿಸಲಾದ ಗರಿಷ್ಠ ಸಂಖ್ಯೆಯ 30 ರ ಸಂಪೂರ್ಣ ಶಕ್ತಿಯನ್ನು ಸಾಧಿಸಬಹುದು ಎಂದು ಭಾವಿಸಲಾಗಿದೆ.

ಪ್ರಾದೇಶಿಕ ಅಸಮಾನತೆಯನ್ನು ಸರಿದೂಗಿಸುವ ಅಗತ್ಯವನ್ನು ಅವಲಂಬಿಸಿ ಕಾಂಗ್ರೆಸ್ ಮೊದಲ ಕಂತಿನಲ್ಲಿ ಅನುಭವಿಗಳಿಗೆ ಮಣೆ ಹಾಕಿದೆ ಎಂಬುದು ಸ್ಪಷ್ಟವಾಗಿದೆ. ಮುಂದಿನ ವಿಸ್ತರಣೆಗಳಲ್ಲಿ, ಕರಾವಳಿ ಕೋಟಾದಿಂದ ಯುಟಿ ಖಾದರ್ ಮತ್ತು ಆರ್‌ವಿ ದೇಶಪಾಂಡೆ ಅವರಿಗೆ ಅವಕಾಶ ಕಲ್ಪಿಸುವುದು ಬಹುತೇಕ ಖಚಿತವಾಗಿದೆ. ಉತ್ತರ ಕರ್ನಾಟಕದಲ್ಲಿ ವಿಜಯ ಗಳಿಸಲು ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟ ಹೆಚ್ಚಿನ ಲಿಂಗಾಯತರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಭದ್ರಕೋಟೆಯನ್ನು ಭೇದಿಸಲು ಕಾಂಗ್ರೆಸ್‌ಗೆ ದೃಢವಾದ ಪ್ರಯತ್ನ ಸಹಾಯ ಮಾಡಿದ ಲಕ್ಷ್ಮಣ ಸವದಿ (ಅಥಣಿ) ಕೂಡ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಮಹಿಳೆಯರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಾಂತರ) ಗೆ ಅವಕಾಶ ಸಿಗಬಹುದು ಎಂದು ಪತ್ರಿಕೆ ವರದಿ ಮಾಡಿದೆ.

ಉತ್ತರ ಕರ್ನಾಟಕದ ಇತರ ಲಿಂಗಾಯತ ನಾಯಕರ ಪೈಕಿ ಹಿರಿಯ ನಾಯಕ ಕೆ.ಎಚ್.ಪಾಟೀಲ್ (ಗದಗ), ಶಿವಾನಂದ ಪಾಟೀಲ (ಬಸವನ ಬಾಗೇವಾಡಿ), ಯಶವಂತ ರಾಯಗೌಡ ಪಾಟೀಲ್ (ಇಂಡಿ), ಶರಣಪ್ರಕಾಶ ಪಾಟೀಲ್ (ಸೇಡಂ) ಮತ್ತು ಬಿಆರ್ ಪಾಟೀಲ್ (ಆಳಂದ್) ಸೇರಿದ್ದಾರೆ. ಒಬಿಸಿ ಕೋಟಾದಿಂದ, ನಾರಾಯಣ ಸ್ವಾಮಿ (ಬಂಗಾರಪೇಟೆ) ಅಜಯ್ ಸಿಂಗ್ (ಜೇವರ್ಗಿ), ರುದ್ರಪ್ಪ ಲಮಾಣಿ (ಹಾವೇರಿ) ಭೀಮಣ್ಣ ನಾಯ್ಕ್ (ಸಿರ್ಸಿ), ಆರ್‌ಬಿ ತಿಮ್ಮಾಪುರ (ಮುಧೋಳ) ಮತ್ತು ರಘುಮೂರ್ತಿ (ಚಳ್ಳಕೆರೆ) ಸೇರ್ಪಡೆಯಾಗಬಹುದು.